Select Your Language

Notifications

webdunia
webdunia
webdunia
webdunia

ಬಾಹುಬಲಿ-2 ಬಿಡುಗಡೆಗೂ ಮುನ್ನವೇ ಶಾಕಿಂಗ್ ನ್ಯೂಸ್ ಬಹಿರಂಗ

ಬಾಹುಬಲಿ-2 ಬಿಡುಗಡೆಗೂ ಮುನ್ನವೇ ಶಾಕಿಂಗ್ ನ್ಯೂಸ್ ಬಹಿರಂಗ
ಹೈದ್ರಾಬಾದ್ , ಮಂಗಳವಾರ, 25 ಏಪ್ರಿಲ್ 2017 (12:17 IST)
ಬಾಹುಬಲಿ-2 ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಚಿತ್ರದ ಕುರಿತಾದ ಹಲವು ಕುತೂಹಲಕಾರಿ ವಿಷಯಗಳು ಹರಿದಾಡುತ್ತಿವೆ. ಬಾಹುಬಲಿ ಭಾಗ-1ರಲ್ಲಿ ರಾಜ ಕುಟುಂಬಕ್ಕೆ ನಿಷ್ಠನಾದ ಕಟ್ಟಪ್ಪ ಬಾಹುಬಲಿಯನ್ನ ಕೊಂದ ಎಂಬ ಕಥೆ ಹೇಳುತ್ತಾ ಚಿತ್ರ ಅಂತ್ಯಗೊಂಡಿದ್ದು,  ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತೆ ಎನ್ನಲಾಗಿದ್ದು, ಇದರಿಂದಲೇ ಚಿತ್ರ ಭಾರೀ ಕುತೂಹಲ ಕೆರಳಿಸಿದೆ.
 

ಏಪ್ರಿಲ್ 28ರಂದು ಚಿತ್ರ ತೆರೆಗೆ ಬರುತ್ತಿದ್ದು, ಇದಕ್ಕೂ ಮುನ್ನವೇ ಬಾಹುಬಲಿಯನ್ನ ಕಟ್ಟಪ್ಪ ಕೊಂQದದ್ದೇಕೆ ಎಂಬ ರಹಸ್ಯ ಬಹಿರಂಗವಾಗಿದೆ ಎಂಬ ಸುದ್ದಿ ಹೈದ್ರಾಬಾದ್`ನಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.

ವದಂತಿಗಳ ಪ್ರಕಾರ, ಬಾಹುಬಲಿಯನ್ನ ಕಟ್ಟಪ್ಪ ಕೊಲ್ಲುವುದಕ್ಕೆ ಶಿವಗಾಮಿ ಕಾರಣವಂತೆ. ಬಲ್ಲಾಳದೇವ ಮತ್ತು ಬಿಜ್ಜಳದೇವ, ಬಾಹುಬಲಿ ವಿರುದ್ಧ ಇಲ್ಲಸಲ್ಲದ್ದನ್ನ ಶಿವಗಾಮಿ ತಲೆಗೆ ತುಂಬಿತ್ತಾರೆ. ಶಿವಗಾಮಿ ಬಾಹುಬಲಿಯನ್ನ ಕೊಲ್ಲಲು ಆದೇಶಿಸುತ್ತಾರೆ. ರಾಜವಂಶಕ್ಕೆ ನಿಷ್ಠನಾದ ಕಟ್ಟಪ್ಪ ರಾಜಾಜ್ಞೆಯನ್ನ ಪಾಲಿಸುತ್ತಾನಂತೆ. Qವೆಲ್ಲವೂ ಊಹಾಪೋಹಗಳಷ್ಠೆ ಚಿತ್ರ ತೆರೆ ಕಂಡ ಬಳಿಕವಷ್ಟೇ ಎಲ್ಲ ಕುತೂಹಲಕ್ಕೆ ತೆರೆ ಬೀಳಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ-2 ರಿಲೀಸ್`ಗೂ ಮುನ್ನ ಪ್ರಭಾಸ್`ಗೆ ರಾಜಮೌಳಿ ಗಿಫ್ಟ್