Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಯಾಕೆ ಇಂಥಾ ತಪ್ಪು ಮಾಡಿದರು?

ದುನಿಯಾ ವಿಜಯ್ ಯಾಕೆ ಇಂಥಾ ತಪ್ಪು ಮಾಡಿದರು?
Bangalore , ಶನಿವಾರ, 12 ನವೆಂಬರ್ 2016 (23:13 IST)
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಅಂತಹದ್ದೊಂದು ಅಪಾಯಕಾರಿ ಸ್ಟಂಟ್ ಮಾಡಿಸಿದ ನಿರ್ದೇಶಕರು, ಸಾಹಸ ನಿರ್ದೇಶಕರು, ನಿರ್ಮಾಪಕರು ಎಲ್ಲರೂ ಅರೆಸ್ಟ್ ಆಗಿದ್ದಾರೆ. ಇಂತಹ ಕ್ಲೈಮ್ಯಾಕ್ಸ್ ಮಾಡಿಸಿದ ಸಾಹಸ ನಿರ್ದೇಶಕನ ತಪ್ಪು ಇದರಲ್ಲಿ ಹೆಚ್ಚು ಅನಿಸಬಹುದು. ಆದರೆ ನಿರ್ಮಾಪಕರು ಹೇಳುವ ಪ್ರಕಾರ ಇಂತಹದ್ದೊಂದು ಸಾಹಸ ಮಾಡಿಸಲು ದುನಿಯಾ ವಿಜಿ ಅವರು ಕೂಡಾ ಕಾರಣವಂತೆ.

ಆದರೆ ಅವರು ಹೇಗೆ ಕಾರಣವಾಗುತ್ತಾರೆ? ಒಂದು ವೇಳೆ ಅವರು ಕಾರಣರಾದರೂ, ಇಂತಹ ತಪ್ಪು ಯಾಕೆ ಮಾಡಿದರು ಎಂದು ಪ್ರಶ್ನೆ ಕಾಡಬಹುದು.  ಬಂಧಿತ ನಿರ್ಮಾಪಕ ಸುಂದರ್ ಹೇಳುವ ಪ್ರಕಾರ ಸಾಹಸ ನಿರ್ದೇಶಕರು ಇಂತಹದ್ದೊಂದು ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ವಿವರಿಸಿದಾಗ ಅದನ್ನು ಡ್ಯೂಪ್ ಬಳಸದೇ ಮಾಡೋಣ ಎಂದಿದ್ದು ದುನಿಯಾ ವಿಜಯ್ ಅಂತೆ.

ನಮ್ಮ ಹುಡುಗರು ಎಲ್ಲದಕ್ಕೂ ರೆಡಿ ಇದ್ದಾರೆ. ಅವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು. ಡ್ಯೂಪ್ ಬಳಸದೇ ನೈಜವಾಗಿ ಮಾಡೋಣ ಅಂತ ದುನಿಯಾ ವಿಜಿಯವರು ಒತ್ತಾಯ ಮಾಡಿದ್ದರಂತೆ. ಹೀಗಾಗಿ ಇಂತಹದ್ದೊಂದು ಸೀನ್ ಗೆ ಸಕಲ ಸಿದ್ಧತೆಯಾಯಿತು.

ಆದರೆ ಇಷ್ಟು ದಿನ ಸಾಹಸ ದೃಶ್ಯಗಳನ್ನು ಮಾಡಿದ ದುನಿಯಾ ವಿಜಿಗೆ ತಮ್ಮದೇ ಸ್ನೇಹಿತರ ಇತಿಮಿತಿಗಳು ಗೊತ್ತಿರಲಿಲ್ಲವಾ? ಅವರು ಯಾಕೆ ಅಂತಹ ದುಸ್ಸಾಹಸ ಮಾಡಿಸಿ ತಮ್ಮ ಸ್ನೇಹಿತರ ಪ್ರಾಣಕ್ಕೆ ಕುತ್ತು ತಂದರು ಎನಿಸಬಹುದು.

ಅದು ದುನಿಯಾ ವಿಜಿಯವರ ಸ್ವಭಾವ. ಸಾಹಸ ದೃಶ್ಯಗಳನ್ನು ಥ್ರಿಲ್ಲಿಂಗ್ ಆಗಿ ಮಾಡುವುದರಲ್ಲಿ ಅವರು ಖುಷಿ ಕಾಣುತ್ತಾರೆ. ಹೊಸದನ್ನು ಮಾಡುವ ಉತ್ಸಾಹ ಅವರಲ್ಲಿ. ಅದಕ್ಕಾಗಿ ಅವರು ತಾವೊಬ್ಬ ಸ್ಟಾರ್ ನಟ ಎನ್ನುವುದನ್ನೂ ಮರೆತು ಬಿಡುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ದನ ಕಾಯೋನು ಚಿತ್ರದಲ್ಲಿ ಸೆಗಣಿ ಮೇಲೆ ಬೀಳುವ ದೃಶ್ಯವೊಂದು ಬರುತ್ತದೆ. ಸಾಮಾನ್ಯವಾಗಿ ಇಂತಹ ದೃಶ್ಯವನ್ನು ಮಾಡುವಾಗ ನೇರವಾಗಿ ಸೆಗಣಿ ಮೇಲೆ ಬಿದ್ದು ಹೊರಳಾಡಲು ಯಾವ ಸ್ಟಾರ್ ನಟನೂ ಸುಲಭವಾಗಿ ಒಪ್ಪುವುದಿಲ್ಲ. ಆದರೆ ವಿಜಿ ಮಾತ್ರ ತಮ್ಮ ಈಗೋ ಮರೆತು ಅಂತಹದ್ದೊಂದು ಸೀನ್ ಮಾಡಿಯೇ ಬಿಡುತ್ತಾರೆ. ಇದೊಂದೇ ಅಲ್ಲ. ಅವರ ವೃತ್ತಿ ಜೀವನದಲ್ಲಿ ಹಲವು ಬಾರಿ ಫೈಟಿಂಗ್ ಸೀನ್ ತಾವೇ ಮಾಡಿ ಏಟು ತಿಂದವರು ವಿಜಿ.

ರಿಸ್ಕಿ ಶಾಟ್ ಗಳು ಎಂದು ಗೊತ್ತಿದ್ದರೂ ಅಪಾಯ ಮೈ ಮೇಲೆ ಎಳೆದುಕೊಳ್ಳುವ ಪ್ರವೃತ್ತಿ ಅವರದ್ದು. ಶಿವಾಜಿ ನಗರ ಸಿನಿಮಾ ಶೂಟಿಂಗ್ ನಲ್ಲೂ ಸ್ಟಂಟ್ ಮಾಡಲು ಹೋಗಿ ಪೆಟ್ಟು ತಿಂದಿದ್ದರು. ಅದೇ ರೀತಿ ಮಾಸ್ತಿ ಗುಡಿಯಲ್ಲೂ ಮಾಡಲು ಹೊರಟಿದ್ದಾರೆ. ಈ ಬಾರಿ ತಾವು ಮಾತ್ರವಲ್ಲ, ತಮ್ಮ ಸ್ನೇಹಿತರನ್ನೂ ರಿಸ್ಕ್ ಗೆ ಎಳೆದಿದ್ದಾರೆ. ಅದೇ ಹುಚ್ಚು ಸಾಹಸ ಮಾಡಲು ಹೋಗಿ ಸ್ನೇಹಿತರು ಜೀವ ಕಳೆದುಕೊಂಡಿದ್ದಾರೆ. ಇನ್ನಾದರೂ ವಿಜಿ ಹುಷಾರಾಗಬಹುದಾ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾ ಗಾಂಧಿ ಇನ್ಮುಂದೆ ಡಾಕ್ಟರ್!