Select Your Language

Notifications

webdunia
webdunia
webdunia
webdunia

ಜೈಲು ಸಿಬ್ಬಂದಿ ಬಳಿ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೇಳಿ ದರ್ಶನ್ ಮಾಡಿದ ಪ್ರತಿಜ್ಞೆಯೇನು ಗೊತ್ತಾ

Darshan Thoogudeepa

Krishnaveni K

ಬಳ್ಳಾರಿ , ಗುರುವಾರ, 19 ಸೆಪ್ಟಂಬರ್ 2024 (14:33 IST)
ಬಳ್ಳಾರಿ: ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಈಗ ಬಳ್ಳಾರಿ ಜೈಲಿನ ಸಿಬ್ಬಂದಿಗಳ ಜೊತೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೇಳಿ ತಿಳಿದುಕೊಂಡು ಪ್ರತಿಜ್ಞೆಯೊಂದನ್ನು ಮಾಡಿದ್ದಾರಂತೆ.

ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾಗಿರುವ ನಟ ದರ್ಶನ್ ಜೈಲು ಸಿಬ್ಬಂದಿಗಳ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕೊಲೆ ನಾನು ಮಾಡಿಲ್ಲ. ಏನಾಗುತ್ತದೋ ಎಲ್ಲಾ ಆ ದೇವರು ನೊಡಿಕೊಳ್ತಾನೆ ಎಂದಿದ್ದಾರಂತೆ ದರ್ಶನ್. ಅಲ್ಲದೆ ಜೈಲು ಸಿಬ್ಬಂದಿಗಳ ಜೊತೆ ಮತ್ತು ತಮ್ಮನ್ನು ಭೇಟಿಯಾಗಲು ಬಂದ ಪತ್ನಿ ವಿಜಯಲಕ್ಷ್ಮಿ ಜೊತೆಗೂ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.

ನಾನು ಇಲ್ಲಿಂದ ಹೊರಗೆ ಹೋದ ಮೇಲೆ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತೇನೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ದರ್ಶನ್ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ವಿಚಾರಿಸಿಕೊಂಡಿದ್ದರು ಎಂದು ಸುದ್ದಿಯಾಗಿತ್ತು.

100 ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಗೆ ಈಗ ಪಶ್ಚಾತ್ತಾಪ ಕಾಡಲಾರಂಭಿಸಿದೆ. ರೇಣುಕಾಸ್ವಾಮಿ ತನ್ನ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ. ಆದರೆ ಆತನನ್ನು ಕಳೆದುಕೊಂಡ ಮೇಲೆ ಆತನ ಗರ್ಭಿಣಿ ಪತ್ನಿ, ವಯಸ್ಸಾದ ತಂದೆ-ತಾಯಿ ಅಸಹಾಯಕರಾಗಿದ್ದಾರೆ. ಇದೀಗ ಅವರಿಗೆ ಸಹಾಯ ಮಾಡಲು ಸಿದ್ಧ ಎಂದು ದರ್ಶನ್ ಹೇಳಿರುವುದಾಗಿ ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ನೋಡಲು ಜೈಲಿಗೆ ನೋಡಲು ಬಂದ ವಿಶೇಷ ವ್ಯಕ್ತಿಗಳು: ದಾಸನ ಮುಖದಲ್ಲಿ ನಗುವೋ ನಗು