Webdunia - Bharat's app for daily news and videos

Install App

ಯಾರು ಇಲ್ಲದಿದ್ದರೇನು.. ಕಮಲ್ ಹಾಸನ್`ಗೆ ನಾನಿದ್ದೇನೆ: ರಜಿನಿಕಾಂತ್

Webdunia
ಗುರುವಾರ, 6 ಏಪ್ರಿಲ್ 2017 (14:14 IST)
ಕಮಲ್ ಹಾಸನ್ ಬೇರೆ ನಟರ ರೀತಿ ಆಸ್ತಿ ಮಾಡಿಲ್ಲ, ಅವರ ಆತ್ಮೀಯರೇ ಅವರಿಗೆ ಜೀವಸೆಲೆಯಾಗಿದ್ದರು. ಅವರನ್ನೆಲ್ಲ ಕಮಲ್ ಕಳೆದುಕೊಂಡಿದ್ದಾರೆ. ಕಮಲ್ ಹಾಸನ್`ಗೆ ನಾವಿದ್ದೇವೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ಕಮಲ್ ಹಾಸನ್ ಹಿರಿಯಣ್ಣ ಚಂದ್ರ ಹಾಸನ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ರಜಿನಿ, ಅವರ ಪೀಳಿಗೆಯ ನಟರಿಗೆ ಹೋಲಿಸಿದರೆ ಆರ್ಥಿಕವಾಗಿ ಕಮಲ್ ಹಾಸನ್ ತಮಗಾಗಿ ಆಸ್ತಿ ಮಾಡಿಕೊಂಡಿಲ್ಲ. ಕೆ. ಬಾಲಚಂದರ್, ಅನಂತು, ಚಾರುಹಾಸನ್ ಮತ್ತು ಚಂದ್ರಹಾಸನ್ ಅವರನ್ನ ತಮ್ಮ ಜೀವಸೆಲೆ ಎಂದು ಪರಿಗಣಿಸಿದ್ದರು. ಈಗ ಅವರೆಲ್ಲ ಕಮಲ್ ಅವರನ್ನ ಬಿಟ್ಟು ಹೋಗಿದ್ದಾರೆ. ನಾವೆಲ್ಲರೂ ಅವರಿಗಾಗಿ ಅವರೊಂದಿಗಿದ್ದೇವೆ ಎಂದು ರಜಿನಿಕಾಂತ್ ಹೇಳಿದ್ದಾರೆ.

ಮಾರ್ಚ್ 18ರಂದು ಕಮಲ್ ಹಾಸನ್ ಸಹೋದರ ಚಂದ್ರಹಾಸನ್ ಲಂಡನ್ನಿನಲ್ಲಿ  ಹೃದಯಾಘಾತದಿಂದ ನಿಧನರಾಗಿದ್ದರು.

ರಜಿನಿ ಮಾತು ಕೇಳಿ ಭಾವುಕರಾದ ಕಮಲ್ ಹಾಸನ್, ರಜಿನಿಕಾಂತ್ ರೀತಿಯ ಹಲವು ಸಹೋದರರು ನನಗಿದ್ದಾರೆ. ಅವರಿಂದ ಹಣ ಮಾಡುವುದು ಮತ್ತು ಸಿನಿಮಾ ಮಾಡುವುದೂ ಕಲಿತಿದ್ದೇನೆ ಎಂದರು. ಇದೇವೇಲೆ, ಅಣ್ಣ ಚಂದ್ರಹಾಸನ್ ಮಗನಿಗಿಂತಲೂ ಹೆಚ್ಚಾಗಿ ತಮ್ಮನ್ನ ನೋಡಿಕೊಳ್ಳುತ್ತಿದ್ದರು ಎಂದು ಕಮಲ್ ಹೇಳಿದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments