Select Your Language

Notifications

webdunia
webdunia
webdunia
webdunia

ತಮಿಳುನಾಡು ಸಿಎಂ ಜತೆ ನಟ ವಿಜಯ್ ಮಾತುಕತೆ! ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ದಳಪತಿ?

ತಮಿಳುನಾಡು ಸಿಎಂ ಜತೆ ನಟ ವಿಜಯ್ ಮಾತುಕತೆ! ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ದಳಪತಿ?
ಚೆನ್ನೈ , ಮಂಗಳವಾರ, 29 ಡಿಸೆಂಬರ್ 2020 (13:04 IST)
ಚೆನ್ನೈ : ತಮಿಳು ನಟ ವಿಜಯ್ ಅವರ ‘ಮಾಸ್ಟರ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಈ ಚಿತ್ರ ಬಿಡುಗಡೆ ಮಾಡಲಾಗುವುದು ಎಂಬ ವದಂತಿ ಇದೆ.

ಅದರ ಜೊತೆಗೆ ಇತ್ತೀಚೆಗೆ ನಟ ವಿಜಯ್ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ. ಈ ನಡುವೆ ಇದೀಗ ನಟ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆದರೆ ಸಿಎಂ ಅವರನ್ನು ಭೇಟಿ ಮಾಡಿದ್ದು ಸಿನಿಮಾ ವಿಚಾರಕ್ಕಾಗಿಯೇ ಹೊರತು ರಾಜಕೀಯ ವಿಚಾರಕ್ಕಾಗಿ ಅಲ್ಲ. ಅವರು ಮಾಸ್ಟರ್ ಚಿತ್ರ ಬಿಡುಗಡೆಯಂದು 100% ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ವೀಕ್ಷಿಸಲು ಅವಕಾಶ ನೀಡುವಂತೆ ಅವರನ್ನು ಕೋರಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರ ಇಲ್ಲವೇ?