Webdunia - Bharat's app for daily news and videos

Install App

ದರ್ಶನ್ ಕೇಸ್ ಗೆ ಟ್ವಿಸ್ಟ್: ರೇಣುಕಾಸ್ವಾಮಿ ವಿರುದ್ಧ ಮತ್ತೊಬ್ಬ ನಟಿ ಆರೋಪ

Krishnaveni K
ಬುಧವಾರ, 26 ಜೂನ್ 2024 (09:50 IST)
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ತನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ನಟಿ ರೂಪಾ ರಾಯಪ್ಪ ಕೂಡಾ ಆರೋಪಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರು ವಿಡಿಯೋ ಸಮೇತ ಆತನ ಪ್ರೊಫೈಲ್ ಪ್ರಕಟಿಸಿದ್ದಾರೆ. ಈ ಹಿಂದೆ ಚಿತ್ರಾಲ್ ರಂಗಸ್ವಾಮಿ ಕೂಡಾ ತನಗೂ ರೇಣುಕಾಸ್ವಾಮಿ ಅಶ್ಲಿಲ ಮೆಸೇಜ್ ಕಳುಹಿಸಿದ್ದ ಎಂದು ದಾಖಲೆ ಸಮೇತ ಹೇಳಿದ್ದರು. ಇದೀಗ ರೂಪ ರಾಯಪ್ಪ ಸರದಿ.

ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಕೆಎಸ್ ಎಂಬ ನಕಲಿ ಖಾತೆಯಿಂದ ರೇಣುಕಾಸ್ವಾಮಿ ಅಶ್ಲಿಲ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ. ಇದೇ ಖಾತೆಯಿಂದ ತನಗೆ ಅಶ್ಲೀಲ ಸಂದೇಶ ಬರುತ್ತಿದುದಾಗಿ ಚಿತ್ರಾಲ್ ಹೇಳಿದ್ದರು. ಇದೀಗ ರೂಪ ರಾಯಪ್ಪ ಕೂಡಾ ಅದೇ ಖಾತೆಯಿಂದ ಅಶ್ಲೀಲ ಸಂದೇಶ ಬರುತ್ತಿತ್ತು ಎಂದು ಹೇಳಿದ್ದಾರೆ.

‘ಮೊದಲನೆಯದಾಗಿ ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರೇಣುಕಾಸ್ವಾಮಿಯವರ ನಕಲಿ ಖಾತೆ ಬಗ್ಗೆ ವರದಿ ನೋಡಿದ್ದೆ. ಅದನ್ನು ನೋಡಿದಾಗ ಈ ಖಾತೆ ಎಲ್ಲೋ ನೋಡಿದ ಹಾಗಿದೆಯಲ್ಲ ಎನಿಸಿತು. ನನ್ನ ಇನ್ ಸ್ಟಾಗ್ರಾಂ ಬ್ಲಾಕ್ ಲಿಸ್ಟ್ ನಲ್ಲಿ ಈ ಖಾತೆಯೂ ಕಾಣಿಸಿತು. ನನಗೂ ಈ ಖಾತೆಯಿಂದ ಅಂತಹ ಮೆಸೇಜ್ ಬರುತ್ತಿತ್ತು. ಯಾವ ರೀತಿಯ ಮೆಸೇಜ್ ಎಂದು ಈಗ ಇಲ್ಲಿ ಹೇಳುವುದು ಬೇಡ. ಆದರೆ ಈ ರೀತಿ ಹೆಣ್ಣು ಮಕ್ಕಳಿಗೆ ಮೆಸೇಜ್ ಕಳುಹಿಸುವ ಟ್ರೋಲರ್ ಗಳು ನಮ್ಮನ್ನು ಯಾರು ಗಮನಿಸುತ್ತಾರೆ ಎಂದು ಉಡಾಫೆ ಮಾಡುವುದು ಬೇಡ’ ಎಂದು ರೂಪ ರಾಯಪ್ಪ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments