Select Your Language

Notifications

webdunia
webdunia
webdunia
webdunia

ನಟಿ ತ್ರಿಷಾ ಕೃಷ್ಣನ್‌ಗೆ ಕಹಿ ಅನುಭವ, ಶೂಟಿಂಗ್ ಕ್ಯಾನ್ಸಲ್

ನಟಿ ತ್ರಿಷಾ ಕೃಷ್ಣನ್‌ಗೆ ಕಹಿ ಅನುಭವ, ಶೂಟಿಂಗ್ ಕ್ಯಾನ್ಸಲ್
Chennai , ಶನಿವಾರ, 14 ಜನವರಿ 2017 (10:03 IST)
ತಮಿಳು ನಾಡು ಸಿನಿಮಾ ತಾರೆ ತ್ರಿಷಾ ಕೃಷ್ಣನ್‌ಗೆ ಜಲ್ಲಿಕಟ್ಟು ಬೆಂಬಲಿಗರಿಂದ ಕಹಿ ಘಟನೆ ಎದುರಾಗಿದೆ. ಅವರ ಕಾರವಾನನ್ನು ಸುತ್ತುವರಿದು ಸಿನಿಮಾ ಶೂಟಿಂಗ್ ನಡೆಯದಂತೆ ತಡೆದಿದ್ದಾರೆ. ಪ್ರಾಣಿ ದಯಾ ಸಂಘ (ಪೆಟಾ) ಕಾರ್ಯಕರ್ತೆಯಾಗಿರುವ ತ್ರಿಷಾ ಅವರು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ವಿರೋಧ ವ್ಯಕ್ತಪಡಿಸಿದ್ದರು.
 
ಇದು ಜಲ್ಲಿಕಟ್ಟು ಬೆಂಬಲಿಸುತ್ತಿರುವವ ಅಸಹನೆಗೆ ಕಾರಣವಾಗಿತ್ತು. ಶಿವಗಂಗ ಜಿಲ್ಲೆಯಲ್ಲಿ ತ್ರಿಷಾ ಅಭಿನಯದ ಗರ್ಜನ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿಗೆ ಆಗಮಿಸಿದ ಪ್ರತಿಭಟನಾಕಾರರು, ಅವರ ಕಾರವಾನನ್ನು ಸುತ್ತುವರಿದು ಹೊರಗೆ ಬರಬೇಕೆಂದು ಆಗ್ರಹಿಸಿದ್ದಾರೆ.
 
ಶೂಟಿಂಗ್‌ ಮಾಡದಂತೆ ತಡೆದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದ ಕಾರಣ ಸ್ಥಳಕ್ಕೆ ಪೊಲೀಸರು ಆಗಮಿಸಿ ನಿಯಂತ್ರಿಸಿದರು. ಪೊಲೀಸರ ರಕ್ಷಣೆಯಲ್ಲಿ ತ್ರಿಷಾ ಸಲ್ಪ ಸಮಯ ಕಳೆಯಬೇಕಾಯಿತು. ತ್ರಿಷಾ ಕ್ಷಮೆ ಕೇಳಬೇಕೆಂದು, ಇಲ್ಲದಿದ್ದರೆ ಶೂಟಿಂಗ್‌ಗೆ ಅವಕಾಶ ಮಾಡಿಕೊಡಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನಷ್ಟೇ ಅಲ್ಲ, ರಾಂದೇವ್, ಮೋದಿ ಸಹ ಬ್ರಹ್ಮಚಾರಿಗಳು