Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಅಂಕುಶ ಹಾಕಿದ ಸೂಪರ್ ಸ್ಟಾರ್ ರಜನಿ

ಅಭಿಮಾನಿಗಳಿಗೆ ಅಂಕುಶ ಹಾಕಿದ ಸೂಪರ್ ಸ್ಟಾರ್ ರಜನಿ
ಚೆನ್ನೈ , ಸೋಮವಾರ, 29 ಮೇ 2017 (18:28 IST)
ರಾಜಕೀಯ ಪ್ರವೇಶ ಕುರಿತಂತೆ ಉಂಟಾದ ವಿವಾದದ ಕುರಿತಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಅಂಕುಶ ಹಾಕಿದ್ದಾರೆ.
 
ತಮ್ಮ ಅಭಿಮಾನಿಗಳು ಮಾಧ್ಯಮಗಳ ಯಾವುದೇ ಸಂವಾದದಲ್ಲಿ ಪಾಲ್ಗೊಳ್ಳಬಾರದು. ಯಾವುದೇ ರೀತಿಯ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.
 
ಸೂಕ್ತ ಸಮಯದಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನುವ ವರದಿಗಳು ಬಹಿರಂಗವಾದ ನಂತರ ತಮಿಳು ಸಂಘಟನೆಗಳು ರಜನಿ ನಿವಾಸದ ಮುಂದೆ ಭಾರಿ ಪ್ರತಿಭಟನೆ ಹಮ್ಮಿಕೊಂಡಿದ್ದವು.ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಬಾರದು ಎಂದು ಗುಡುಗಿದ್ದವು.
 
ತಮಿಳು ಸಂಘಟನೆಗಳ ವಿರುದ್ಧ ರಜನಿಕಾಂತ್ ಅಭಿಮಾನಿಗಳ ಸಂಘ ಕೂಡಾ ತೀವ್ರ ಪ್ರತಿಭಟನೆ ನಡೆಸಿ ತಮ್ಮ ನಾಯಕನನ್ನು ಬೆಂಬಲಿಸಿದ್ದವು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಚೋಪ್ರಾಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ