Select Your Language

Notifications

webdunia
webdunia
webdunia
webdunia

ದರ್ಶನ್ ಮತ್ತು ಸುದೀಪ್ ವಿವಾದ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರವಿದು

ದರ್ಶನ್ ಮತ್ತು ಸುದೀಪ್ ವಿವಾದ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರವಿದು
ಬೆಂಗಳೂರು , ಮಂಗಳವಾರ, 14 ಮಾರ್ಚ್ 2017 (08:07 IST)
ಬೆಂಗಳೂರು(ಮಾ.14.): ಸ್ಯಾಂಡಲ್ ವುಡ್`ನ ಸೂಪರ್ ಸ್ಟಾರ್`ಗಳಾದ ಸುದೀಪ್ ಮತ್ತು ದರ್ಶನ್ ನಡುವಿನ ವಿವಾದ ಬಿರುಗಾಳಿ ಬಂದುಹೋಗಿದ್ದು, ಎಲ್ಲರಿಗೂ ಗೊತ್ತೇ ಇದೆ. ಚಲನಚಿತ್ರ ರಂಗದ ಹಿರಿಯ ನಟ ಅಂಬರೀಷ್ ಒಬ್ಬರಿಂದ ಮಾತ್ರ ಅವರಿಬ್ಬರ ನಡುವೆ ಉಂಟಾಗಿರುವ ಮನಸ್ತಾಪ ಬಗೆಹರಿಸಲು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಂತೆ ಕುಮಾರ್ ಎಂಬ ಅಭಿಮಾನಿ ದರ್ಶನ್ ಮತ್ತು ಸುದೀಪ್ ಅವರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಅಂಬರೀಶ್ ಮನವೊಲಿಸಿ ಎಂದು ಸುಮಲತಾ ಅಂಬರೀಷ್ ಅವರಿಗೆ ಟ್ವೀಟ್ ಮಾಡಿದ್ದಾನೆ.

ಅಭಿಮಾನಿಯ ಟ್ವಿಟ್`ಗೆ ಉತ್ತರಿಸಿರುವ ಸುಮಲತಾ ಅಂಬರೀಷ್, ಸುದೀಪ್ ಮತ್ತು ದರ್ಶನ್ ಇಬ್ಬರೂ ಪ್ರಭುದ್ಧರು. ಸರಿಯೋ ತಪ್ಪೋ ಅವರಿಬ್ಬರೂ ಒಂದು ನಿರ್ಧಾರ ಕೈಗೊಂಡಿದ್ದಾರೆ ಅದನ್ನ ಗೌರವಿಸೋಣ ಎನ್ನುವ ಮೂಲಕ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾರೆ.

ಮೆಜೆಸ್ಟಿಕ್ ಚಿತ್ರದಲ್ಲಿ ನಟಿಸುವಂತೆ ನನಗೆ ಮೊದಲು ಆಫರ್ ಬಂದಿತ್ತು. ನಾನು ಈಗಲೇ ನಟಿಸಲು ಸಾಧ್ಯವಿಲ್ಲ ದರ್ಶನ್ ಅವರಿಗೆ ಅವಕಾಶ ನೀಡುವಂತೆ ಸೂಚಿಸಿದ್ದೆ ಎಂದು ಸುದೀಪ್ ಟಿವಿಯೊಂದರ ಸಂದರ್ಶನದಲ್ಲಿ ಹೇಳಿದ್ದ ಮಾತು ಸುದೀಪ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಬಳಿಕ ಟ್ವೀಟ್ ಮಾಡಿದ್ದ ದರ್ಶನ್ ನಾವಿಬ್ಬರೂ ಸ್ನೇಹಿತರಲ್ಲ ಎಂದುಬಿಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ಬುಕ್ ಲೈವ್`ನಲ್ಲಿ ಪಾರೂಲ್ ಯಾದವ್ ಮಸ್ತ್ ಹೋಳಿ ಸೆಲಬ್ರೇಶನ್