Select Your Language

Notifications

webdunia
webdunia
webdunia
webdunia

ಸಿಎಂ ಜೊತೆ ಮಹತ್ವದ ಮೀಟಿಂಗ್ ಮಾಡಲಿರುವ ಶಿವರಾಜ್ ಕುಮಾರ್

ಸಿಎಂ ಜೊತೆ ಮಹತ್ವದ ಮೀಟಿಂಗ್ ಮಾಡಲಿರುವ ಶಿವರಾಜ್ ಕುಮಾರ್
ಬೆಂಗಳೂರು , ಗುರುವಾರ, 26 ಆಗಸ್ಟ್ 2021 (08:54 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗಿದ್ದರೂ ಚಿತ್ರಮಂದಿರಗಳಿಗೆ ಮಾತ್ರ ಇನ್ನೂ ಸಂಪೂರ್ಣವಾಗಿ ತೆರೆಯಲು ಅವಕಾಶ ಸಿಕ್ಕಿಲ್ಲ.


ಇದರಿಂದಾಗಿ ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಚಿತ್ರರಂಗ ಮೇಲೇಳಬೇಕಾದರೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲೇ ಬೇಕು.

ಈಗ ಭಜರಂಗಿ 2 ಸೇರಿದಂತೆ ಕೆಲವೊಂದು ಬಿಗ್ ಸಿನಿಮಾಗಳು ಬಿಡುಗಡೆಗೆ ಕಾದು ನಿಂತಿದೆ. ಈ ಸಿನಿಮಾಗಳ ಬಿಡುಗಡೆ ವೇಳೆ ಚಿತ್ರಮಂದಿರಕ್ಕೆ ಶೇ.100 ರಷ್ಟು ತೆರೆಯಲು ಅನುಮತಿ ಸಿಗಬೇಕು ಎಂಬುದು ಸಿನಿಮಂದಿಯ ಒತ್ತಾಯ. ಈ ಎಲ್ಲಾ ವಿಚಾರಗಳ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಲು ಶಿವರಾಜ್ ಕುಮಾರ್ ನೇತೃತ್ವದ ತಂಡ ಸಿದ್ಧವಾಗಿದೆ. ಮುಂದಿನ ವಾರ ಸಿಎಂ ಜೊತೆ ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಷನ್ಗೆ ನಿಲ್ತಾರಾ ನಟ ಸೋನು ಸೂದ್?