Select Your Language

Notifications

webdunia
webdunia
webdunia
webdunia

ಅಭಿಮಾನಿಗೆ ಮಿಡಿದ ಶಿವರಾಜ್ ಕುಮಾರ್ ಹೃದಯ

ಅಭಿಮಾನಿಗೆ ಮಿಡಿದ ಶಿವರಾಜ್ ಕುಮಾರ್ ಹೃದಯ
Bangalore , ಮಂಗಳವಾರ, 7 ಮಾರ್ಚ್ 2017 (09:04 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಭಿಮಾನಿಯ ಕೊನೆಯಾಸೆ ನೆರವೇರಿಸಲು ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ.

 
ಎಚ್.ಡಿ. ಕೋಟೆ ತಾಲೂಕು ಆಲನಹಳ್ಳಿಯ ಜಯಕುಮಾರ್ (19) ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಡು ಬಡವರಾದ ಕಾರಣ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಜಯಕುಮಾರ್ ಸಾವಿನಂಚಿನಲ್ಲಿದ್ದಾರೆ.

ಆದರೆ ಅವರು ಅಪ್ಪ ಶಿವಣ್ಣ ಅಭಿಮಾನಿ. ಸಾಯುವ ಮೊದಲು ಒಮ್ಮೆಯಾದರೂ ತನ್ನ ಆರಾಧ್ಯ ದೈವವನ್ನು ನೋಡಬೇಕೆಂಬುದು ಅವರ ಆಸೆ. ಇದೀಗ ಅವರ ಆಸೆ ನೆರವೇರಿಸಲು ಶಿವರಾಜ್ ಕುಮಾರ್ ಮುಂದೆ ಬಂದಿದ್ದು, ತನ್ನ ಮನೆಗೇ ಅಭಿಮಾನಿಯನ್ನು ಕರೆಸಿಕೊಂಡು ಅಗತ್ಯ ನೆರವು ನೀಡುವ ಉದ್ದೇಶ ಹೊಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರಿನಲ್ಲಿ ಸುದೀಪ್ ಅಭಿಮಾನಿ ಸಾವು