Publish Date: Thu, 03 Aug 2017 (11:28 IST)
Updated Date: Thu, 03 Aug 2017 (11:32 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಮುಗಿಯಿತು ಎಂದುಕೊಂಡಿದ್ದ ವಿವಾದವೊಂದು ದುತ್ತನೆ ಎದುರಾಗಿದೆ.
ಆಗಸ್ಟ್ 11 ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ನಿರ್ದೇಶಕ ಎಂವಿಆರ್ ರಮೇಶ್ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೆ ಕಾರಣ ಟೈಟಲ್ ವಿವಾದ.
ಲೀಡರ್ ಎಂಬ ಶೀರ್ಷಿಕೆ ಹಕ್ಕು ಇದಕ್ಕೂ ಮೊದಲು ರಮೇಶ್ ನೋಂದಣಿ ಮಾಡಿಸಿದ್ದರಂತೆ. ಆದರೆ ಅದೇ ಶೀರ್ಷಿಕೆ ಇಟ್ಟು ಸಿನಿಮಾ ತರುತ್ತಿರುವುದಕ್ಕೆ ಅವರು ಮತ್ತು ಚಿತ್ರತಂಡ ಜಟಾಪಟಿ ನಡೆಸಿತ್ತು. ಕೊನೆಗೆ ಶಿವಣ್ಣ ಚಿತ್ರಕ್ಕೆ ಮಾಸ್ ಲೀಡರ್ ಎಂದು ಹೆಸರಿಡಲಾಯಿತು.
ಹಾಗಿದ್ದರೂ ರಮೇಶ್ ತಗಾದೆ ತೆಗೆದಿದ್ದಾರೆ. ವಾಣಿಜ್ಯ ಮಂಡಳಿಯಿಂದ ತನಗೆ ನ್ಯಾಯ ಸಿಕ್ತಾ ಇಲ್ಲ ಎಂದು ರಮೇಶ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದೀಗ ವಿವಾದ ಮತ್ತಷ್ಟು ಕಾವೇರಿದೆ.