Select Your Language

Notifications

webdunia
webdunia
webdunia
webdunia

ಸತ್ಯರಾಜ್ ಇಫೆಕ್ಟ್: ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು

ಸತ್ಯರಾಜ್ ಇಫೆಕ್ಟ್: ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು
Bangalore , ಶನಿವಾರ, 22 ಏಪ್ರಿಲ್ 2017 (09:06 IST)
ಬೆಂಗಳೂರು: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಒತ್ತಾಯಕ್ಕೆ ಮಣಿದು ಬಾಹುಬಲಿ ಚಿತ್ರದ ಪಾತ್ರಧಾರಿ ಕಟ್ಟಪ್ಪ ಕನ್ನಡಿಗರ ಕ್ಷಮೆ ಕೇಳುತ್ತಿದ್ದಂತೆ ಅತ್ತ ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನಗಳು ರದ್ದುಗೊಂಡಿವೆ.

 
ತಮಿಳುನಾಡಿನಲ್ಲಿ ಪ್ರದರ್ಶನ ಕಾಣಬೇಕಿದ್ದ ಕನ್ನಡದ ‘ಶುದ್ಧಿ’ ಸೇರಿದಂತೆ ಮೂರು ಚಿತ್ರಗಳ ಪ್ರದರ್ಶನ ಇದ್ದಕ್ಕಿದ್ದಂತೆ ರದ್ದುಗೊಳಿಸಲು ತಮಿಳು ಚಿತ್ರ ವಿತರಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ನಿರ್ಮಾಪಕ ಹಾಗೂ ಕನ್ನಡ ಹೋರಾಟಗಾರ ಸಾ ರಾ ಗೋವಿಂದು ಖಚಿತಪಡಿಸಿದ್ದಾರೆ. ಆನ್ ಲೈನ್ ಬುಕಿಂಗ್ ತಾಣಗಳಲ್ಲಿ ಚಿತ್ರದ ಬುಕಿಂಗ್ ಮಾಡಿದ ಪ್ರೇಕ್ಷಕರಿಗೆ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಹಣ ಮರಳಿಸಲಾಗಿದೆ ಎನ್ನಲಾಗಿದೆ. ಇದೀಗ ಎಲ್ಲಿಯವರೆಗೆ ಮುಟ್ಟುತ್ತದೋ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧನುಶ್`ಗೆ ಮದ್ರಾಸ್ ಹೈಕೋರ್ಟ್`ನಿಂದ ಬಿಗ್ ರಿಲೀಫ್