Select Your Language

Notifications

webdunia
webdunia
webdunia
webdunia

ಶಂಕರ್ ನಾಗ್ ಹುಟ್ಟುಹಬ್ಬ: ಮೇರುಕಲಾವಿದನ ಸ್ಮರಿಸಿದ ಚಿತ್ರರಂಗ

ಶಂಕರ್ ನಾಗ್ ಹುಟ್ಟುಹಬ್ಬ: ಮೇರುಕಲಾವಿದನ ಸ್ಮರಿಸಿದ ಚಿತ್ರರಂಗ
Bangalore , ಬುಧವಾರ, 9 ನವೆಂಬರ್ 2016 (12:05 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ನಿರ್ದೇಶಕ ಶಂಕರ್ ನಾಗ್. ಅವರು ಇಂದು ನಮ್ಮನ್ನು ಅಗಲಿರಬಹುದು. ಆದರೂ ಅವರ  ಹೆಸರು ಕೇಳಿದರೆ ಈಗಲೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತದೆ. ಅಂತಹ ಮೇರು ಕಲಾವಿದನ ಜನುಮ ದಿನವಾದ ಇಂದು ಚಿತ್ರರಂಗದ ಕೆಲವರು ಅವರನ್ನು ಸ್ಮರಿಸಿಕೊಂಡಿದ್ದಾರೆ.

ಜನಮಾನಸದಲ್ಲಿ ಸೂರ್ಯ ಚಂದ್ರನಂತೆ ನೆಲೆ ನಿಂತವರು. ಬದುಕಿದ ದಿನಕ್ಕಿಂತ ಬದುಕಿಗೆ ಬೆಲೆ ಕಟ್ಟಿದವರು. ಅವರು ಎಲ್ಲೆ ಇರಲಿ ಅವರ  ಆತ್ಮದ ಜತೆ ಕನ್ನಡಿಗರು ಇರುತ್ತಾರೆ ಎಂದು ಶಂಕರ್ ಭಾವಚಿತ್ರ ಸಮೇತ ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಕೂಡಾ ಟ್ವಿಟರ್ ನಲ್ಲಿ ಅವರ ಭಾವಚಿತ್ರ ಹಾಕಿ ನಮ್ಮೆಲ್ಲರ ಹೃದಯದಲ್ಲಿ ಇಂದಿಗೂ ಜೀವಂತವಾಗಿರುವ ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಕಿರು ಅವಧಿಯಲ್ಲೇ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಸೇರಿದಂತೆ ಹಲವು ವಿಶಿಷ್ಟ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಶಂಕರ್ ನಾಗ್ ಹಲವು ಪ್ರಯೋಗಗಳಿಗೆ ಪ್ರಥಮರಾದವರು. ನೀರಿನ ಅಡಿಯಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಿಸಿದ ಮೊದಲ ನಿರ್ದೇಶಕ ಎಂಬ ಹೆಗ್ಗಳಿಕೆ ಅವರದ್ದು. ತಾವು ನಿರ್ದೇಶಿಸಿದ ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡಿಗ. ಆಟೋರಾಜ ಎನ್ನುವ ಚಿತ್ರದ ಮೂಲಕ ಎಲ್ಲಾ ಆಟೋ ಚಾಲಕರ ಆರಾಧ್ಯ ದೈವವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿಗೆ ರಜನೀಕಾಂತ್ ಸೇರಿದಂತೆ ಸಿನಿಮಾ ಕಲಾವಿದರ ಮೆಚ್ಚುಗೆ