Select Your Language

Notifications

webdunia
webdunia
webdunia
webdunia

ವಂಚನೆ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಿರ್ದೇಶಕ ಬಂಧನ

ವಂಚನೆ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಿರ್ದೇಶಕ ಬಂಧನ
Bangalore , ಮಂಗಳವಾರ, 28 ಫೆಬ್ರವರಿ 2017 (22:59 IST)
ಸ್ಯಾಂಡಲ್‌ವುಡ್‌ನಲ್ಲಿ ವಿವಾದಿತ ನಿರ್ದೇಶಕ ಎಂದೇ ಕರೆಸಿಕೊಂಡವರು ಕೊಟ್ಲಲ್ಲಪ್ಪೋ ಕೈ ಖ್ಯಾತಿಯ ರಿಷಿ. ಈಗವರ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು, ಸಿನಿಮಾ ಮಾಡುವುದಾಗಿ ದುಡ್ಡು ಪಡೆದು ಮೋಸ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
 
’ಒನ್ ವೇ’ ಚಿತ್ರದ ನಿರ್ಮಾಪಕ ದೀಪಕ್‌ರಿಂದ ರೂ.5 ಲಕ್ಷ ಪಡೆದಿದ್ದರಂತೆ. ಹಣ ಹಿಂತಿರುಗಿಸಲು ಕೇಳಿದಾಗ ಚೆಕ್ ನೀಡಿದ್ದು ಅದು ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ರಿಷಿ ಮೇಲೆ ದೀಪಕ್ ದೂರು ನೀಡಿದ್ದರು. 
 
ಈ ಹಿಂದೆ ಕೊಟ್ಲಲ್ಲಪ್ಪೋ ಕೈ ಚಿತ್ರದ ವಿವಾದ ಮೂಲಕ ರಿಷಿ ಸದ್ದು ಮಾಡಿದ್ದರು. ಆ ಬಳಿಕ ನಟಿ ಮೈತ್ರಿಯಾ ಗೌಡ ಅವರನ್ನು ಮದುವೆ ಆಗಿರುವುದಾಗಿ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಮಾಸ್ತಿಗುಡಿ ಚಿತ್ರದಲ್ಲಿ ತನ್ನ ಹಾಡು ಬಳಸಿಕೊಂಡಿದ್ದಾರೆ ಎಂದು ಫಿಲಂ ಚೇಂಬರ್ ಮೆಟ್ಟಿಲೇರಿದ್ದರು ರಿಷಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏಳು ವರ್ಷಗಳ ಬಳಿಕ ಅಭಿಷೇಕ್, ಐಶ್ವರ್ಯಾ ಜೋಡಿ?