Webdunia - Bharat's app for daily news and videos

Install App

ದರ್ಶನ್- ಸುದೀಪ್ ಕುಚಿಕು ಸ್ನೇಹ ಅಂತ್ಯ?

Webdunia
ಸೋಮವಾರ, 6 ಮಾರ್ಚ್ 2017 (07:26 IST)
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ  ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ನಮ್ಮ ನಡುವೆ ಯಾವುದೇ ಸ್ನೇಹವಿಲ್ಲ ಎಂದು ಸ್ವತಃ ದರ್ಶನ್ ಟ್ವೀಟ್ ಮಾಡಿದ್ದಾರೆ.
 
ನಾನು  ಹಾಗೂ ಸುದೀಪ್ ಇನ್ನು ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗದ ನಟರಷ್ಟೇ. ನಮ್ಮ ನಡುವಿನ ಸ್ನೇಹದ ಕುರಿತು ಯಾವುದೇ ಊಹಾಪೋಹಗಳು ಇಂದಿನಿಂದ ಕೊನೆಗೊಳ್ಳಲಿ, ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
 
ತಮ್ಮ ಈ ನಡೆಗೆ ಸಿನಿಪ್ರಿಯರು ಆಘಾತ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ತಮ್ಮ ಕೋಪಕ್ಕೆ ಕಾರಣವಾಗಿರುವ ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದ್ದು, ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನಗೆ ನೋವಾಗಿದೆ. ಈ ಹೇಳಿಕೆ ನೀಡಿದ್ದೇಕೆ? ಈ ಕುರಿತು ಸುದೀಪ್ ಕ್ಲಾರಿಟಿ ನೀಡಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
 
ದರ್ಶನ್ ಅವರ ಈ ಮುನಿಸಿಗೆ ಕಾರಣ, ಸುದೀಪ್  ಅವರು ಕೆಲ ವರ್ಷಗಳ ಹಿಂದೆ ನೀಡಿರುವ ಹೇಳಿಕೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ಮೆಜೆಸ್ಟಿಕ್‌( ದರ್ಶನ್‌ಗೆ ಬ್ರೇಕ್ ನೀಡಿದ ಚಿತ್ರ)ನಲ್ಲಿ ನಟಿಸಲು ಬಂದ ಅವಕಾಶವನ್ನು ನಾನು ನಿರಾಕರಿಸಿದ್ದೆ. ಅಲ್ಲದೇ ಈ ಅವಕಾಶವನ್ನು ದರ್ಶನ್ ಅವರಿಗೆ ನೀಡುವಂತೆ ಸೂಚಿಸಿದ್ದೆ ಎಂದು ಹೇಳುವುದರ ಮೂಲಕ ದರ್ಶನ್ ಅವರಿಗೆ ಅವಕಾಶ ಸಿಗಲು ತಾವೇ ಕಾರಣ ಎಂದು ಪ್ರತಿಪಾದಿಸಿದ್ದರು.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments