ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ ಪದ್ಮಾವತಿ. ಈ ಚಿತ್ರದ ಬಿಡುಗಡೆ ಬಗ್ಗೆ ಈಗಾಗಲೆ ವಿವಾದ ತಲೆದೋರಿದೆ. ರಜಪೂತ್ ಸಮುದಾಯದ ಮುಖಂಡಾರು ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ಬಿಡುಗಡೆಗೆ ರಾಜಸ್ತಾನದಲ್ಲಿ ಅನುಮತಿ ನೀಡುವುದಾಗಿ ರಾಜ್ಯ ಸಚಿವ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.
ರಾಜಸ್ಥಾನ ವಿಧಾನಸಭೆ ಎದುರುಗಡೆ ಸುವರ್ಣ ಅಧಿಕಾರ್ ಆರಕ್ಷಣ್ ಸಂಘ ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಅವರು, ಪದ್ಮಾವತಿ ಚಿತ್ರಕ್ಕೆ ರಾಜ್ಯದಾದ್ಯಂತ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.
ರಜಪೂತ ರಾಣಿ ಪದ್ಮಿನಿ ಜೀವನಾಧಾರಿತ ಚಿತ್ರ ಪದ್ಮಾವತಿಯಲ್ಲಿ ಐತಿಹಾಸಿಕ ವಿಷಯವನ್ನು ತಿರುಚಲಾಗಿದೆ. ಇದರಿಂದ ರಜಪೂತ ಸಮುದಾಯದ ಗುಂಪೊಂದು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. ಈ ಸಂದರ್ಭದಲ್ಲಿ ಭನ್ಸಾಲಿ ಮೇಲೆ ಹಲ್ಲೆ ನಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.