ನಟ ಚೇತನ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ

Webdunia
ಮಂಗಳವಾರ, 15 ಜೂನ್ 2021 (09:14 IST)
ಬೆಂಗಳೂರು: ಕನ್ನಡ ಚಿತ್ರರಂಗವನ್ನು ಕಳಪೆ ಎಂದವರಿಗೆ ಬೆಂಬಲ ಕೊಟ್ಟ ನಟ ಚೇತನ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.


‘ದಕ್ಷಿಣ ಭಾರತದ ಅತ್ಯಂತ ಕೆಟ್ಟ ಚಿತ್ರರಂಗವಾದ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಕನ್ನಡ ಸಿನಿಮಾ ಎಂಬ ಮರುಭೂಮಿಯಲ್ಲಿ ಚೇತನ್ ಮಳೆಯಂತೆ ಬಂದಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಮಾಡಿದ ಆಕ್ಷೇಪಾರ್ಹ ಟ್ವೀಟ್ ನ್ನು ಚೇತನ್ ಬೆಂಬಲಿಸಿದ್ದಾರೆ.

ಇದು ರಕ್ಷಿತ್ ಶೆಟ್ಟಿ ಗಮನಕ್ಕೆ ಬಂದಿದೆ. ‘ಚೇತನ್ ಅವರೇ ನಿಮ್ಮ ಕೆಲಸಗಳನ್ನು ನಾನು ಗೌರವಿಸುತ್ತೇನೆ. ಆದರೆ ಮೊದಲು ನಿಮ್ಮ ಆಲೋಚನೆಯನ್ನು ಸರಿಪಡಿಸಿಕೊಳ್ಳಿ. ದಕ್ಷಿಣ ಸಿನಿಮಾ ರಂಗ ನನ್ನಂತಹ ಹಲವರಿಗೆ ನೆಲೆ ಕೊಟ್ಟಿದೆ ಮತ್ತು ಮಾತನಾಡಲು ಅವಕಾಶ ಕೊಟ್ಟಿದೆ. ಇದನ್ನು ಹಲವು ದಿಗ್ಗಜರು ಕಟ್ಟಿದ್ದಾರೆ. ಕೆಟ್ಟದ್ದನ್ನು ಬಿತ್ತಿದರೆ ಕೆಡುಕೇ ಆಗುತ್ತದೆ. ಅದಕ್ಕೆ ನಿಮಗೆ ಒಳಿತಾಗಲಿ’ ಎಂದು ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.  ಇದಕ್ಕೆ ಚೇತನ್ ಕೂಡಾ ಪ್ರತಿಕ್ರಿಯಿಸಿದ್ದು, ನಿಮ್ಮ ವಾದವನ್ನು ಒಪ್ಪುತ್ತೇನೆ. ನಾನೂ ಕೂಡಾ ಇದೇ ಚಿತ್ರರಂಗದವನು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BigBoss Season Finale: ದಿನ ಬಾಕಿಯಿರುವಾಗಲೇ ಗಿಲ್ಲಿ ಬಗ್ಗೆ ಶಿವಣ್ಣ ಶಾಕಿಂಗ್ ಮಾತು

ಬಿಗ್‌ಬಾಸ್‌ ಶೋ ಫೈನಲ್‌ ವಾರ ಶುರುವಾಗುತ್ತಿದ್ದಂತೆ ಪ್ರೋಗ್ರಾಂ ಹೆಡ್‌ಗೆ ಬಿಗ್‌ಶಾಕ್‌: ಕಾರಣ ಏನು ಗೊತ್ತಾ

ಅಣ್ಣಾವ್ರ 35 ವರ್ಷಗಳ ಪದ್ಧತಿ ಮುರಿದಿದ್ದ ಅಂಬರೀಶ್

ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಪುಟ್ಟಕ್ಕನ ಮಕ್ಕಳು

ಸಂಕ್ರಾಂತಿಯಂದು ನಟಿ ಅಮೂಲ್ಯ ಅಭಿನಯದ ಪೀಕೂ ಸಿನಿಮಾದ ನಟನ ಘೋಷಣೆ

ಮುಂದಿನ ಸುದ್ದಿ
Show comments