Select Your Language

Notifications

webdunia
webdunia
webdunia
webdunia

ಮೊದಲ ನಿರ್ದೇಶಕರ ಋಣ ತೀರಿಸಿದ ರಕ್ಷಿತ್ ಶೆಟ್ಟಿ

ಮೊದಲ ನಿರ್ದೇಶಕರ ಋಣ ತೀರಿಸಿದ ರಕ್ಷಿತ್ ಶೆಟ್ಟಿ
Bangalore , ಗುರುವಾರ, 6 ಜುಲೈ 2017 (12:45 IST)
ಬೆಂಗಳೂರು: ಮೊನ್ನೆಯಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ರಕ್ಷಿತ್ ಶೆಟ್ಟಿ ಇದೀಗ ತಮ್ಮನ್ನು ನಿರ್ದೇಶಿಸಿದ ಮೊದಲ ನಿರ್ದೇಶಕನ ಸಹಾಯಕ್ಕೆ ಧಾವಿಸಿ ಸುದ್ದಿಯಾಗಿದ್ದಾರೆ. ಆ ಮೂಲಕ ಮೊದಲ ನಿರ್ದೇಶಕನ ಋಣ ತೀರಿಸುವ ಯತ್ನ ಮಾಡಿದ್ದಾರೆ.


ರಕ್ಷಿತ್ ಹಿಂದೆ ‘ನಮ್ ಏರಿಯಾಲ್ ಒಂದು ದಿನ’ ಎಂಬ ಸಿನಿಮಾ ಮಾಡಿದ್ದರು. ಅದರ ನಿರ್ದೇಶಕರು ಅರವಿಂದ್ ಕೌಶಿಕ್. ಇದೀಗ ಅದೇ ಅರವಿಂದ್  ನಿರ್ದೇಶನದ ಹುಲಿರಾಯ ಚಿತ್ರದ ವಿತರಣೆ ಹಕ್ಕುಗಳನ್ನು ರಕ್ಷಿತ್ ಪಡೆದಿದ್ದಾರೆ.

ನಿರ್ದೇಶಕ, ನಟ, ನಿರ್ಮಾಪಕ ಮುಂತಾದ ಜವಾಬ್ದಾರಿ ನಿಭಾಯಿಸಿದ ರಕ್ಷಿತ್ ಈ ಮೂಲಕ ವಿತರಣೆ ರಂಗಕ್ಕೆ ಇಳಿಯುತ್ತಿದ್ದಾರೆ. ಹುಲಿರಾಯ ಆಗಸ್ಟ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಬಾಲು ನಾಗೇಂದ್ರ, ದಿವ್ಯ ಮುಂತಾದ ಹೊಸಬರ ತಾರಾಗಣವಿದೆ.

ಇದನ್ನೂ ಓದಿ.. ‘ರಾಹುಲ್ ಗಾಂಧಿ ಒಬ್ಬ ಬಚ್ಚಾ’

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ ಚಿತ್ರಕ್ಕಾಗಿ ಸುದೀಪ್ ತೆಗೆದುಕೊಳ್ಳುತ್ತಿರುವ ಕೋಟಿಗಳೆಷ್ಟು ಗೊತ್ತಾ..?