ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಗೆ ಪತಿ ಅಶ್ವಿನ್ ರಾಮಕುಮಾರ್ ವಿಚ್ಚೇದನ ನೀಡಿದ್ದಾರೆ.ಸುಮಾರು ಆರು ವರ್ಷಗಳ ಕಾಲ ದಾಂಪತ್ಯ ಜೀವನದಲ್ಲಿದ್ದ ಸೌಂದರ್ಯ ಮತ್ತು ಚೆನ್ನೈ ಉದ್ಯಮಿಯಾಗಿರುವ ಅಶ್ಲಿನ್ ಇದೀಗ ಪರಸ್ಪರ ಒಮ್ಮತದ ಮೇರೆಗೆ ವಿಚ್ಚೇದನಗೊಂಡಿದ್ದಾರೆ.
ಸೌಂದರ್ಯ, ತಂದೆ ರಜನಿ ನಾಯಕರಾಗಿರುವ ಕೊಚ್ಚಾಡಿಯನ್ 3 ಡಿ ಚಿತ್ರ ನಿರ್ಮಿಸಿದಾಗ ದೇಶದ ಚಿತ್ರರಂಗದಲ್ಲಿ ಹೊಸ ಖ್ಯಾತಿಯನ್ನು ಪಡೆದಿದ್ದರು.
ಸೌಂದರ್ಯ ಮತ್ತು ಅಶ್ವಿನ್ಗೆ ಒಂದು ವರ್ಷ ವಯಸ್ಸಿನ ಪುತ್ರನಿದ್ದಾನೆ.
ಸೌಂದರ್ಯಗೆ ವಿಚ್ಚೇದನದ ದುಖಃದ ನಡುವೆ ಸಂತೋಷದ ಸುದ್ದಿಯೊಂದು ಬಂದಿದೆ. ಅವರನ್ನು ಆನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ(ಎಡಬ್ಲ್ಯೂಬಿಐ) ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಎಡಬ್ಲ್ಯೂಬಿಐ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಸಂತೋಷವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್. ಚಿನ್ನಿ ಕೃಷ್ಣ ತಿಳಿಸಿದ್ದಾರೆ.
ಸೌಂದರ್ಯ ಚಿತ್ರ ನಿರ್ಮಾಣದ ಜೊತೆ ಜೊತೆಯಲ್ಲಿ ಸಂಸ್ಥೆಗಾಗಿಯೂ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೌಂದರ್ಯಳ ಹಿರಿಯ ಸಹೋದರಿ ಐಶ್ವರ್ಯ ಧನುಷ್ ಅವರನ್ನು ವಿಶ್ವಸಂಸ್ಥೆಯ ಮಹಿಳಾ ಅಡ್ವೋಕೇಟ್ ಫಾರ್ ಜೆಂಡರ್ ಇಕ್ವಾಲಿಟಿ ಆಂಡ್ ವುಮೆನ್ ಎಂಪೌರ್ಮೆಂಟ್ ಇನ್ ಇಂಡಿಯಾ ಸಂಸ್ಥೆಗೆ ಆಯ್ಕೆ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ