Select Your Language

Notifications

webdunia
webdunia
webdunia
webdunia

ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ

ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ
ನವದೆಹಲಿ , ಶುಕ್ರವಾರ, 23 ಡಿಸೆಂಬರ್ 2016 (14:29 IST)
ಕೆಲವೇ ದಿನಗಳಲ್ಲಿ 2016 ವರ್ಷಕ್ಕೆ ಗುಡ್‌ಬೈ ಹೇಳುವ ಸಮಯದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ವಿಚ್ಚೇದನಕ್ಕಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೆಲೆಬ್ರೆಟಿಗಳ ಬ್ರೆಕ್‌ಪ್ ಪಟ್ಟಿಯಲ್ಲಿ ಮತ್ತೊಂದು ಹೆಸರು ಸೇರ್ಪಡೆಯಾದಂತಾಗಿದೆ.
ರಜನಿಕಾಂತ್ ಪುತ್ರಿ ಸೌಂದರ್ಯ ಕೈಗಾರಿಕೋದ್ಯಮಿಯಾದ ಪತಿ ಅಶ್ವಿನ್ ರಾಮ್‌ಕುಮಾರ್‌ಗೆ ವಿಚ್ಚೇದನ ನೀಡಲು ನಿರ್ಧರಿಸಿದ್ದು, ನಗರದ ಕೌಟಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.  
 
ಇದಕ್ಕಿಂತ ಮೊದಲು, ಪತಿ ಪತ್ನಿಯ ಮಧ್ಯೆ ವಿರಸವಿದೆ ಎನ್ನುವ ವರದಿಗಳು ಹರಿದಾಡುತ್ತಿರುವಂತೆ ಸೌಂದರ್ಯ ಕೂಡಲೇ ಟ್ವೀಟ್ ಮಾಡಿ, ನಾನು ವಿವಾಹವಾಗಿರುವುದು ನಿಜ. ಕಳೆದ ಒಂದು ವರ್ಷದಿಂದ ನಾವಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ನಮ್ಮ ಕುಟುಂಬದ ಖಾಸಗಿ ವಿಷಯವನ್ನು ಗೌರವಿಸಿ ಎಂದು ಮನವಿ ಮಾಡಿದ್ದರು. 
 
ಸೌಂದರ್ಯ ಮತ್ತು ಅಶ್ವಿನ್ ರಾಮ್‌ಕುಮಾರ್ 2010 ಸೆಪ್ಟೆಂಬರ್ 3 ರಂದು ಚೆನ್ನೈನ ರಾಣಿ ಮೆಯಮ್ಮಾಯಿ ಹಾಲ್‌ನಲ್ಲಿ ವಿವಾಹವಾಗಿದ್ದರು. ದಂಪತಿಗಳಿಗೆ ವೇದ್ ಎನ್ನುವ ಪುತ್ರನಿದ್ದಾನೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

’ಕರೀನಾ ಮಗು ಕ್ಯಾನ್ಸರ್‌ನಿಂದ ಸಾಯಲಿ’ ಎಂದ ಟ್ವೀಟಿಗ