Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಬರುವ ಬಗ್ಗೆ ಅಭಿಮಾನಿಗಳ ಎದುರೇ ಘೊಷಿಸಿದ ರಜಿನಿಕಾಂತ್

ರಾಜಕೀಯಕ್ಕೆ ಬರುವ ಬಗ್ಗೆ ಅಭಿಮಾನಿಗಳ ಎದುರೇ ಘೊಷಿಸಿದ ರಜಿನಿಕಾಂತ್
ಚೆನ್ನೈ , ಶುಕ್ರವಾರ, 19 ಮೇ 2017 (10:48 IST)
ಅಂತೂ ಇಂತೂ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯಕ್ಕೆ ಬರುವುದು ಬಹುತೇಕ ಖಚಿತಗೊಂಡಿದೆ. ಚೆನ್ನೈನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ತಮಿಳುನಾಡು ರಾಜಕೀಯಕ್ಕೆ ಬದಲಾವಣೆ ಬೇಕಿದೆ. ಯುದ್ಧಕ್ಕೆ ಸಿದ್ಧರಾಗಿ ಎನ್ನುವ ಮೂಲಕ ಶೀಘ್ರ ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟಿದ್ದಾರೆ.
 

ಸದ್ಯದ ರಾಜಕೀಯದಲ್ಲಿ ಜನರ ಬಗ್ಗೆ ಯೋಚಿಸುವ ಪರಿಸ್ಥಿತಿ ಇಲ್ಲ. ಜನರಿಗಾಗಿ ಏನನ್ನೂ ಮಾಡುತ್ತಿಲ್ಲ.  ಇದು ಬದಲಾಗಬೇಕಿದೆ. ನನಗೀಗ ಕೆಲ ಜವಾಬ್ದಾರಿ ಮತ್ತು ಕೆಲಸಗಳಿವೆ. ನಿಜವಾದ ಯುದ್ಧ ಎದುರಾದಾಗ ಯುದ್ಧ ಎದುರಿಸೋಣ ಎಂದಿದ್ದಾರೆ.

ಕೋಡಂಬಾಂಕಂನಲ್ಲಿ ನಡೆದ ಅಭಿಮಾನಿಗಳ ಮೀಟ್ ಅಂಡ್ ಗ್ರೀಟ್ ಕಾರ್ಕ್ರಮದ ಕೊನೆಯ ದಿನ ರಜಿನಿಕಾಂತ್ ಈ ಘೋಷಣೆ ಮಾಡಿದ್ದಾರೆ.  ನಾನೊಬ್ಬ ತಮಿಳಿಗ ಎನ್ನುವುದಕ್ಕೆ ಹೆಮ್ಮೆ ಇದೆ. ನನ್ನನ್ನ ತಮಿಳಿಗನಾಗಿ ಮಾಡಿದ್ದು ನನ್ನ ಅಭಿಮಾನಿಗಳು ಎನ್ನುವ ಮೂಲಕ ರಜಿನಿ ರಾಜಕೀಯ ವಿಷಯ ಬಂದಾಗ ತಮಿಳು ಮೂಲದ ಪ್ರಶ್ನೆ ಎತ್ತುತ್ತಿದ್ದ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ರಜಿನಿಕಾಂತ್ ರಾಜಕೀಯಕ್ಕೆ ಬಂದರೆ ಅದು ದುರಂತ, ಅವರು ಹೊರಗಿನವರು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿದ್ದರು. 24 ಗಂಟೆಯೊಳಗೆ ಈ ಮಾತಿಗೆ ರಜಿನಿ ಉತ್ತರ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ನಟ ದೊಡ್ಡಣ್ಣಗೆ ಅನಾರೋಗ್ಯ