Publish Date: Fri, 27 Feb 2026 (19:12 IST)
Updated Date: Fri, 27 Feb 2026 (19:16 IST)
ಮಂಗಳೂರು: ತುಳುನಾಡಿನ ಬಹು ನಿರೀಕ್ಷಿತ ತುಳು ಚಲನಚಿತ್ರ ಬಿರ್ದುದಾ ಕಂಬಳ ಶುಕ್ರವಾರದಂದು ಭಾರತ್ ಚಿತ್ರಮಂದಿರದಲ್ಲಿ ರೋಮಾಂಚಕವಾಗಿ ಬಿಡುಗಡೆ ಸಮಾರಂಭವನ್ನು ಆಚರಿಸಿತು.
ತುಳುನಾಡಿನಾದ್ಯಂತದ ಚಲನಚಿತ್ರ ಪ್ರೇಮಿಗಳು, ಸಾಂಸ್ಕೃತಿಕ ದಿಗ್ಗಜರು, ಕಲಾವಿದರು ಮತ್ತು ಚಿತ್ರರಂಗದ ಗಣ್ಯರನ್ನು ಈ ಸಿನಿಮಾ ಸೆಳೆಯಿತು. ಕರಾವಳಿ ಸೊಗಡಿನ ಈ ಸಿನಿಮಾ ಉತ್ತಮ ಪ್ರದರ್ಶನ ಕಾಡುವ ಎಲ್ಲ ಲಕ್ಷಣಗಳಿದೆ.
ಈ ಸಿನಿಮಾವನ್ನು ಕನ್ನಡದ ಹಿರಿಯ ನಿರ್ದೇಶಕ ಡಾ.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದು, ಅರುಣ್ ರೈ ತೋಡಾರ್ ಅವರು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಬಾಲಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ನಟ-ಹಾಸ್ಯ ಕಲಾವಿದ ಆರ್.ಧನರಾಜ್, ಪಮ್ಮಿ ಕೊಡಿಯಾಲ್ಬೈಲ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಅಮೀನ್, ಸಂಗೀತ ಮಾಂತ್ರಿಕ ಮಣಿಕಾಂತ್ ಕದ್ರಿ, ಕೆ ಕೆ ಪೇಜಾವರ ಸ್ವರಾಜ್ ಶೆಟ್ಟಿ, ರಾಜೇಶ್ ಕುಡ್ಲ, ಅರುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.