Select Your Language

Notifications

webdunia
webdunia
webdunia
webdunia

ನೇತ್ರ ಶಿಬಿರಕ್ಕೆ ನೆರವಾದ ಪುನೀತ್ ರಾಜ್ ಕುಮಾರ್

ನೇತ್ರ ಶಿಬಿರಕ್ಕೆ ನೆರವಾದ ಪುನೀತ್ ರಾಜ್ ಕುಮಾರ್
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (07:55 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಕಷ್ಟದಲ್ಲಿರುವ ಅಭಿಮಾನಿಗಳಿಗೆ ನೆರವಾಗುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಪುನೀತ್ ಮತ್ತೆ ತಮ್ಮ ಸಹೃದಯವನ್ನು ತೋರ್ಪಡಿಸಿದ್ದಾರೆ.


ವರ ನಟ ಡಾ. ರಾಜ್ ಕುಟುಂಬ ನೇತ್ರದಾನ ವಿಚಾರದಲ್ಲಿ ಮೊದಲಿನಿಂದಲೂ ಹೆಚ್ಚು ಸಾಮಾಜಿಕ ಕಳಕಳಿ ಹೊಂದಿದ್ದವರು. ಡಾ. ರಾಜ್ ತಮ್ಮ ನೇತ್ರದಾನ ಮಾಡಿ ಅದೆಷ್ಟೋ ಅಭಿಮಾನಿಗಳಿಗೆ ಸ್ಪೂರ್ತಿಯಾದವರು.

ಇದೀಗ ಅವರ ಹಾದಿಯಲ್ಲೇ ನಡೆಯುತ್ತಿರುವ ಅಣ್ಣಾವ್ರ ಮಕ್ಕಳ ಪೈಕಿ ಪುನೀತ್ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ 1000 ಮಂದಿನ ಕಣ್ಣು ತಪಾಸಣೆಯ ಸ್ಪಾನ್ಸರ್ ಶಿಪ್ ನೀಡುವ ಮೂಲಕ ನೆರವಾಗಿದ್ದಾರೆ. ಆ ಮೂಲಕ ಎಷ್ಟೋ ಜನ ಬಡವರಿಗೆ ನೆರವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್: ಈ ಬಾರಿ ಚಾನೆಲ್ ಚೇಂಜ್