Webdunia - Bharat's app for daily news and videos

Install App

ರಾಕಿಂಗ್ ಸ್ಟಾರ್ ಯಶ್ ಮಾತಿಗೆ ಭಾವುಕರಾದ ಅಪ್ಪು ಪುತ್ರಿ

Webdunia
ಶನಿವಾರ, 22 ಅಕ್ಟೋಬರ್ 2022 (08:10 IST)
Photo Courtesy: Twitter
ಬೆಂಗಳೂರು: ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾತಿಗೆ ಅಪ್ಪು ಪುತ್ರಿ ವಂದಿತಾ ಭಾವುಕರಾದ ಘಟನೆ ನಡೆದಿದೆ.

ಪ್ರೀತಿಯ ಅಪ್ಪು ಬಗ್ಗೆ ಯಶ್ ಸುದೀರ್ಘವಾಗಿ ಮಾತನಾಡುತ್ತಿರುವಾಗ ಅಪ್ಪು ಪುತ್ರಿಯ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಮಾತ್ರವಲ್ಲ, ವೇದಿಕೆಯಲ್ಲಿದ್ದ ಅಶ್ವಿನಿ ಪುನೀತ್ ಕೂಡಾ ಭಾವುಕರಾದರು.

ಪುನೀತ್ ಇಡೀ ಕರ್ನಾಟಕದ ಮಗ. ಅವರು ನಮ್ಮೆಲ್ಲರಿಗೆ ಸ್ಪೂರ್ತಿ. ಅವರ ಹೆಸರನ್ನು ಉಳಿಸಿಕೊಂಡು ಹೋಗಲು ನಿಮಗೆ ಶಕ್ತಿ ಕೊಡಲಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಅಶ್ವಿನಿಗೆ ಯಶ್ ಭರವಸೆ ಕೊಟ್ಟಿದ್ದಾರೆ.

ಇನ್ನು, ಗಂಧದ ಗುಡಿ ಸಿನಿಮಾ ಕೆಜಿಎಫ್ ದಾಖಲೆಯನ್ನೂ ಧೂಳೀಪಟ ಮಾಡಲಿ ಎಂದು ಯಶ್ ಹಾರೈಸಿದ್ದಾರೆ. ಅಲ್ಲದೆ, ಅಪ್ಪು ಹೆಸರಲ್ಲಿ ನಟ ಪ್ರಕಾಶ‍್ ರಾಜ್ ಆಂಬ್ಯುಲೆನ್ಸ್ ಸೇವೆ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಈ ಕೆಲಸಕ್ಕೆ ತಮಿಳು ನಟ ಸೂರ್ಯ, ಚಿರಂಜೀವಿ ಮುಂತಾದವರು ಕೈ ಜೋಡಿಸಿದ್ದಾರಂತೆ. ಎಲ್ಲಾ ಜಿಲ್ಲೆಗಳಿಗೂ ಅಪ್ಪು ಎಕ್ಸ್ ಪ್ರೆಸ್ ಹೆಸರಿನ ಆಂಬ್ಯುಲೆನ್ಸ್ ಸೇವೆ ಒದಗಿಸಿಕೊಡಲು ಇನ್ನು ಎಷ್ಟು ಆಂಬ್ಯುಲೆನ್ಸ್ ಬೇಕಾಗಬಹುದೋ ಅಷ್ಟನ್ನೂ ನನ್ನ ಯಶೋಮಾರ್ಗ ಫೌಂಡೇಷನ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಮಾಲಿಕ ಕೆವಿಎನ್ ಅವರ ಫೌಂಡೇಷನ್ ವತಿಯಿಂದ ಮಾಡಿಕೊಡುತ್ತೇವೆ ಎಂದು ಯಶ್ ಘೋಷಿಸಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments