Select Your Language

Notifications

webdunia
webdunia
webdunia
webdunia

ಸಿಎಂ ಭೇಟಿಗೆ ಮುಂದಾದ ನಿರ್ಮಾಪಕ ಕೆ ಮಂಜು

ಸಿಎಂ ಭೇಟಿಗೆ ಮುಂದಾದ ನಿರ್ಮಾಪಕ ಕೆ ಮಂಜು
ಬೆಂಗಳೂರು , ಬುಧವಾರ, 7 ಏಪ್ರಿಲ್ 2021 (09:01 IST)
ಬೆಂಗಳೂರು: ಥಿಯೇಟರ್ ನಲ್ಲಿ 100 ಶೇಕಡಾ ಅವಕಾಶಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಿರ್ಮಾಪಕ ಕೆ ಮಂಜು ನಾಳೆ ಸಿಎಂ ಭೇಟಿಗೆ ತೀರ್ಮಾನಿಸಿದ್ದಾರೆ.


ಇಂದಿಗೆ ಥಿಯೇಟರ್ ಗಳಲ್ಲಿ ಶೇ. 100 ಪ್ರೇಕ್ಷಕರ ಹಾಜರಾತಿಗೆ ಕೊನೆಯ ಅವಕಾಶ. ನಾಳೆಯಿಂದ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಜು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ.

ನಿರ್ಮಾಪಕ ಸಾಯುತ್ತಿದ್ದಾನೆ. ಅವನಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ಮಂಜು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಕೆ ಮಂಜು ನಿರ್ಮಾಣದ, ಅವರ ಪುತ್ರ ಶ್ರೇಯಸ್ ಮಂಜು ನಾಯಕರಾಗಿರುವ ವಿಷ್ಣು ಪ್ರಿಯ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ಮಂಜು ಈಗ ಹೋರಾಟಕ್ಕಿಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣ ಟಾಕೀಸ್ ಏಪ್ರಿಲ್ 16 ಕ್ಕೆ ಟಾಕೀಸ್ ಗೆ