Select Your Language

Notifications

webdunia
webdunia
webdunia
webdunia

ವಿವಾದಗಳಿಗೆ ತೆರೆ ಎಳೆಯುವ ಯತ್ನ ಮಾಡಿದ ಪ್ರಕಾಶ್ ರೈ

ವಿವಾದಗಳಿಗೆ ತೆರೆ ಎಳೆಯುವ ಯತ್ನ ಮಾಡಿದ ಪ್ರಕಾಶ್ ರೈ
ಬೆಂಗಳೂರು , ಬುಧವಾರ, 4 ಅಕ್ಟೋಬರ್ 2017 (11:20 IST)
ಬೆಂಗಳೂರು: ಗೌರಿ ಲಂಕೇಶ್  ಹತ್ಯೆ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಮೇಲೆ ವ್ಯಂಗ್ಯ ಮಾಡಿದ್ದ ಪ್ರಕಾಶ್ ರಾಜ್ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದಾರೆ.


ಟ್ವಿಟರ್ ನಲ್ಲಿ ವಿವಾದಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಹೇಳಿದ್ದು ಗೌರಿ ಹತ್ಯೆಯನ್ನು ಸಂಭ್ರಮಿಸುವ ಮೋದಿ ಫಾಲೋವರ್ ಗಳನ್ನು ಉದ್ದೇಶಿಸಿ ಎಂದಿದ್ದಾರೆ.

ಗೌರಿ ಹತ್ಯೆಯನ್ನು ತಮ್ಮ ಫಾಲೋವರ್ ಗಳೇ ಸಂಭ್ರಮಿಸುತ್ತಿದ್ದರೂ ಪ್ರಧಾನಿ ಮೋದಿ ಸುಮ್ಮನಿದ್ದಾರಲ್ಲಾ ಎಂದು ಆ ಹೇಳಿಕೆ ನೀಡಿದ್ದೇನೆ. ಒಬ್ಬ ನಾಗರಿಕನಾಗಿ ನನಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ನಾನು ಒಬ್ಬ ನಟ ಅಷ್ಟೇ. ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ ಎಂದು ಪ್ರಕಾಶ್ ರೈ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

7 ವರ್ಷಗಳ ನಂತರ ಸುದೀಪ್-ಅಂಬರೀಷ್ ಸಮಾಗಮ