Select Your Language

Notifications

webdunia
webdunia
webdunia
webdunia

ಪ್ರತಿಭಟನೆಗೆ ಬೆಚ್ಚಿದ ಪೊಗರು ತಂಡ; ವಿವಾದಿತ ದೃಶ್ಯಕ್ಕೆ ಇಂದಿನಿಂದಲೇ ಕತ್ತರಿ

ಪ್ರತಿಭಟನೆಗೆ ಬೆಚ್ಚಿದ ಪೊಗರು ತಂಡ; ವಿವಾದಿತ ದೃಶ್ಯಕ್ಕೆ ಇಂದಿನಿಂದಲೇ ಕತ್ತರಿ
ಬೆಂಗಳೂರು , ಬುಧವಾರ, 24 ಫೆಬ್ರವರಿ 2021 (09:12 IST)
ಬೆಂಗಳೂರು: ಕಳೆದ ವಾರ ಬಿಡುಗಡೆಯಾಗಿದ್ದ ಧ್ರುವ ಸರ್ಜಾ ನಾಯಕರಾಗಿರುವ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡುವ ದೃಶ್ಯ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.


ಈ ಕುರಿತಾಗಿ ಬ್ರಾಹ್ಮಣ ಮಂಡಳಿ, ಮಂತ್ರಾಲಯ ಶ್ರೀಗಳು, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಬಂದಿತ್ತು. ಅಷ್ಟೇ ಅಲ್ಲ, ಬ್ರಾಹ್ಮಣ ಮಂಡಳಿ ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು. ಇಲ್ಲಿ ಸಭೆ ನಡೆದಬಳಿಕ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ನಂದಕಿಶೋರ್ ಕ್ಷಮೆ ಯಾಚಿಸಿದ್ದಲ್ಲದೆ, ಇಂದಿನಿಂದಲೇ ದೃಶ್ಯಕ್ಕೆ ಕತ್ತರಿ ಹಾಕುವುದಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಜೀವನದಿಂದಲೇ ದೂರವಾಗುತ್ತಾರಂತೆ ಜಗ್ಗೇಶ್