Webdunia - Bharat's app for daily news and videos

Install App

ದರ್ಶನ್ ಹುಟ್ಟುಹಬ್ಬ ದಿನವೇ ಪವಿತ್ರಾ ಗೌಡಗೆ ನಿರಾಸೆ

Krishnaveni K
ಸೋಮವಾರ, 16 ಫೆಬ್ರವರಿ 2026 (16:23 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಇಂದು ದರ್ಶನ್ ಹುಟ್ಟುಹಬ್ಬದ ದಿನವೇ ನಿರಾಸೆಯಾಗಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿ. ಸದ್ಯಕ್ಕೆ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು ದರ್ಶನ್ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬವನ್ನು ಅವರು ಜೈಲಿನಲ್ಲಿಯೇ ಆಚರಿಸುವಂತಾಗಿದೆ.

ಇದರ ನಡುವೆ ಪವಿತ್ರಾ ಗೌಡಗೂ ಇಂದು ಕೋರ್ಟ ಬಿಗ್ ಶಾಕ್ ಕೊಟ್ಟಿದೆ. ಮಧ್ಯಂತರ ಜಾಮೀನಿಗಾಗಿ ಪವಿತ್ರಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಕೋರ್ಟ್ ತಳ್ಳಿ ಹಾಕಿದೆ. ಮಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಜೊತೆಗಿರಲು ಜಾಮೀನು ನೀಡಿ ಎಂದು ಪವಿತ್ರಾ ಕೋರ್ಟ್ ಮೊರೆ ಹೋಗಿದ್ದರು.

ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಪವಿತ್ರಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಪವಿತ್ರಾಗೆ ನಿರಾಸೆಯಾಗಿದೆ. ಸದ್ಯಕ್ಕೆ ಆಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಶಿಕ್ಷೆ ಮುಂದುವರಿಸಬೇಕಿದೆ. ಇದೀಗ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ನಿಷೇಧಿತ ಉತ್ಪನ್ನಗಳಿಗೆ ಪ್ರಚಾರ: ಬಾಲಿವುಡ್‌ ಸ್ಟಾರ್‌ ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಪೋಕಾಸ್‌ ನೋಟಿಸ್

ಶೂಟಿಂಗ್ ಸ್ಥಳಕ್ಕೆ ಹೋಗುವಾಗ ದಾರಿ ತೋರಿಸಿದ ವ್ಯಕ್ತಿ, ಖ್ಯಾತ ನಟ ಮಮ್ಮೂಟ್ಟಿ ಆ ವ್ಯಕ್ತಿ ಜತೆ ನಡೆದುಕೊಂಡ ರೀತಿ ನೋಡಿದ್ರೆ ಶಾಕ್

ಅಂಗವೈಕಲ್ಯ ಬಗ್ಗೆ ತಮಾಷೆ: ಹಾಸ್ಯನಟ ಸಮಯ್‌ ರೈನಾ ಸೇರಿದಂತೆ ನಾಲ್ವರ ವಿರುದ್ಧ ದಾಖಲಾಗಿದ್ದ ಕೇಸ್ ಕೈಬಿಟ್ಟ ಸುಪ್ರೀಂ, ವಿವರಣೆ ಇಲ್ಲಿದೆ

ಟಾಕ್ಸಿಕ್‌ನಲ್ಲಿ ಹಸಿಬಿಸಿ ದೃಶ್ಯ: ಮಹಿಳೆಯರಿಗೆ ಗೌರವ ನೀಡದಿದ್ದರೆ ನಿಮ್ಮನ್ನು ರಾಜ್ಯದಿಂದ ಹೊರಹಾಕುತ್ತೇವೆ

ಮುಂದಿನ ಸುದ್ದಿ
Show comments