Webdunia - Bharat's app for daily news and videos

Install App

ಈ ಪಡ್ಡೆಹುಲಿ ಪಕ್ಕಾ ವಿಷ್ಣುಭಕ್ತ!

Webdunia
ಮಂಗಳವಾರ, 9 ಏಪ್ರಿಲ್ 2019 (13:09 IST)
ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಅದ್ದೂರಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗಲಿದೆ.
ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುಭಕ್ತನಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳಲ್ಲಿ ವಿಷ್ಣು ಗೆಟಪ್ಪಿನಲ್ಲಿಯೇ ನಟಿಸೋ ಮೂಲಕ ಶ್ರೇಯಸ್ ಸಾಹಸ ಸಿಂಹನ ಸಮಸ್ತ ಅಭಿಮಾನಿಗಳ ಪ್ರೀತಿಗೂ ಪಾತ್ರರಾಗಿದ್ದಾರೆ. ಆದರೆ ಇದರ ಹಿಂದೆಯೂ ಕೂಡಾ ರಿಯಲ್ ಆದ ಅಪ್ಪಟ ವಿಷ್ಣು ಅಭಿಮಾನವಿದೆ ಅನ್ನೋದು ವಿಶೇಷ!
 
ಗಂಡುಗಲಿ ಎಂದೇ ಹೆಸರಾಗಿರೋ ನಿರ್ಮಾಪಕ ಕೆ. ಮಂಜು ವಿಷ್ಣುವರ್ಧನ್ ಅವರ ಆಪ್ತರಾಗಿದ್ದವರು. ಅದೆಷ್ಟೋ ವರ್ಷದ್ದು ಈ ಸಖ್ಯ. ಹೀಗೆ ತಂದೆಯ ಕಾರಣದಿಂದ ಸಾಹಸಸಿಂಹನ ಪ್ರಭಾವ ಬೆಳೆಸಿಕೊಂಡಿದ್ದ ಶ್ರೇಯಸ್ ಕೂಡಾ ನಿಜಜೀವನದಲ್ಲಿಯೂ ವಿಷ್ಣು ಅವರನ್ನು ಆರಾಧಿಸಲಾರಂಭಿಸಿದ್ದರು. ಪಡ್ಡೆಹುಲಿ ಚಿತ್ರದಲ್ಲಿರೋ ವಿಷ್ಣು ಪ್ರೇಮದ ತುಂಬಾ ವಾಸ್ತವದ ಈ ಛಾಯೆಯಿದೆ.
 
ತಮ್ಮ ಮಗನ ಮೊದಲ ಚಿತ್ರದಲ್ಲಿಯೂ ಕೆ ಮಂಜು ಅವರು ವಿಷ್ಣು ಅಭಿಮಾನವನ್ನು ಫಳ ಫಳಿಸುವಂತೆ ಮಾಡಿದ್ದಾರೆ. ಈ ಕಾರಣದಿಂದಲೇ ವಿಷ್ಣು ಮೇಲಿನ ಅಭಿಮಾನದ ಹಾಡುಗಳೂ ಹೊರ ಬಂದಿವೆ. ಈ ಮೂಲಕವೇ ಮರೆಯಾದ ಆ ಚೇತನಕ್ಕೆ ಅರ್ಥಪೂರ್ಣ ಗೌರವ ಸಲ್ಲಿಸಿದ ತೃಪ್ತಿ ಮಂಜು ಅವರಲ್ಲಿದೆ. ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ಹೇಗೆ ಅಭಿನಯಿಸಿದ್ದಾರೆಂಬುದನ್ನು ನೋಡಲು ಸಾಹಸ ಸಿಂಹನ ಅಭಿಮಾನಿ ಬಳಗ ಕಾತರಗೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ, ಮಗಳ ದಿಟ್ಟ ನಿರ್ಧಾರ ಕೇಳಿ ಶಾಕ್ ಆದ ಬಾಲಿವುಡ್ ನಟ, ಆಥಿಯಾ ಶೆಟ್ಟಿ ಬಗ್ಗೆ ಸುನೀಲ್ ಮೆಚ್ಚುಗೆಯ ಮಾತು

Mysore Sandal: ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ, ಪಡೆದ ಸಂಭಾವನೆ ಕೇಳಿದ್ರೆ ಶಾಕ್‌

ಸಲ್ಮಾನ್‌ ಖಾನ್‌ರನ್ನು ಭೇಟಿಯಾಗಬೇಕೆಂದು ಮನೆಗೆ ನುಗ್ಗಿದ ಅಭಿಮಾನಿ, ಇದೀಗ ಪೊಲೀಸ್ ಅತಿಥಿ

Sonu Nigam: ನಾನು ಪ್ರೀತಿಸುವ ಕನ್ನಡಿಗರ ಬಗ್ಗೆ ಹೀಗೆಲ್ಲಾ ಯಾಕೆ ಹೇಳಲಿ: ಮತ್ತೆ ಗರಂ ಆದ ಸೋನು ನಿಗಂ

Madenur Manu: ಒಬ್ಬರು ಲೇಡಿ ಡಾನ್, ಇಬ್ಬರು ಹೀರೋಗಳು ನನ್ನನ್ನು ಸಿಕ್ಕಿ ಹಾಕಿಸಿದ್ದಾರೆ: ಮಡೆನೂರು ಮನು

ಮುಂದಿನ ಸುದ್ದಿ
Show comments