ಒನ್ ಲವ್ 2 ಸ್ಟೋರಿ ಹೀರೋಗೆ ಪವರ್ ಸ್ಟಾರ್ ರಿಯಲ್ ಹೀರೋ!

Webdunia
ಸೋಮವಾರ, 12 ಆಗಸ್ಟ್ 2019 (16:54 IST)
ಯಾರೊಳಗೇ ಆದರೂ ಸಿನಿಮಾ ಕನಸೊಂದು ಊಟೆಯೊಡೆಯೋದೇ ಸಿನಿಮಾಗಳ ಮೂಲಕ. ಹಾಗೆ ಸಿನಿಮಾ ನೋಡೋ ಹುಚ್ಚು ಅನೇಕರನ್ನು ಗಾಂಧಿನಗರದ ಹೆಬ್ಬಾಗಿಲಿಗೆ ತಂದು ನಿಲ್ಲಿಸುತ್ತೆ. ಈ ಬಣ್ಣದ ಜಗತ್ತಿನಲ್ಲಿಯೇ ತನ್ನದೊಂದು ಸಾಧನೆಯ ಚಿತ್ತಾರ ಮೂಡಿಸಬೇಕೆಂಬ ಹೆಬ್ಬಯಕೆಯನ್ನೂ ಮೂಡಿಸುತ್ತೆ. ಈ ದಿಸೆಯಲ್ಲಿತೆರೆ ಮೇಲೆ ವಿಜೃಂಭಿಸೋ ಯಾರೋ ಹೀರೋ ಇಂಥಾ ಕನಸುಗಳಿಗೆ ಅಗೋಚರವಾಗಿ ನೀರೆರೆದು ಪೋಷಿಸುತ್ತಾರೆ. ಹಾಗೆ ಚುಗುರೊಡೆದ ಗುರಿಯೊಂದು ಅದೇ ಗಾಂಧಿನಗರದಲ್ಲಿ ರೆಂಬೆ ಕೊಂಬೆ ಮೂಡಿಸಿಕೊಂಡು ಮೆರೆಯುವಂತೆಯೂ ಮಾಡುತ್ತೆ. ಈ ಮಾತಿಗೆ ಇದೇ ಹದಿನಾರನೇ ತಾರೀಕು ಬಿಡುಗಡೆಯಾಗುತ್ತಿರೋ ಒನ್ ಲವ್ 2 ಸ್ಟೋರಿ ಚಿತ್ರದ ನಾಯಕರಲ್ಲೊಬ್ಬರಾದ ಸಂತೋಷ್ ತಾಜಾ ಉದಾಹರಣೆ.
ಈ ಸಿನಿಮಾ ಮೂಲಕವೇ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಕನಸು ಹೊತ್ತಿದ್ದ ಸಂತೋಷ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೀಗೆ ಸಂತೋಷ್ ನಾಯಕನಾಗಿದ್ದರ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಾತ್ರವಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ಆದರೆ ಅದು ಸಿನಿಮಾಗಿರೋ ಶಕ್ತಿ, ನಾಯಕ ನಟರಿರೋ ಪ್ರಭಾವ ಗಳ ಬಗ್ಗೆ ಗೊತ್ತಿರೋ ಮಂದಿಗೆ ಸಹಜವಾಗಿಯೇ ಕಾಣಿಸುತ್ತದೆ.
 
ಸಂತೋಷ್ ಅವರು ಬೆಂಗಳೂರಿನ ಹುಡುಗ. ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಬಗ್ಗೆ ಆಕರ್ಷಣೆಗೆ ಬಿದ್ದವರು. ಆ ನಂತರದ ದಿನಗಳಲ್ಲಿ ಅದನ್ನೇ ಮನಸೊಳಗೆ ಸಾಕಿಕೊಂಡು ಪಕ್ವಗೊಳಿಸಿಕೊಂಡರಾದರೂ ಬದುಕು ಕರೆದೊಯ್ದು ನಿಲ್ಲಿಸಿದ್ದು ಬೇರೆಯದ್ದೇ ದಾರಿಗೆ. ಇಂಜಿನೀರಿಂಗ್ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಅವರನ್ನು ಸಿನಿಮಾರಂಗಕ್ಕೆ ಕರೆದು ತಂದು ನಿಲ್ಲಿಸಿದ್ದು ಪವರ್ ಸ್ಟಾರ್ ಪುನೀತ್ ಮೇಲಿನ ಅಭಿಮಾನ. ಅವರನ್ನು ಆರಾಧಿಸುತ್ತಾ, ಅವರ ಸಿನಿಮಾಗಳನ್ನು ನೋಡುತ್ತಾ ಅವರಂತೆಯೇ ಆಗೋ ಕನಸು ಕಂಡ ಸಂತೋಷ್ ಈಗ ಕಡೆಗೂ ಹೀರೋ ಆಗಿ ಆಗಮಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments