Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಈ ಸಾರಿ ಹುಟ್ಟುಹಬ್ಬ ಆಚರಿಸಲ್ಲ

ಶಿವರಾಜ್ ಕುಮಾರ್ ಈ ಸಾರಿ ಹುಟ್ಟುಹಬ್ಬ ಆಚರಿಸಲ್ಲ
Bangalore , ಮಂಗಳವಾರ, 11 ಜುಲೈ 2017 (12:04 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ಹುಟ್ಟುಹಬ್ಬವಿದ್ದು, ಯಾವುದೇ ಗೌಜಿ ಗದ್ದಲಗಳಿಲ್ಲದೆ ಸುಮ್ಮನಿರಲು ಶಿವಣ್ಣ ನಿರ್ಧರಿಸಿದ್ದಾರೆ.


ಅದಕ್ಕೆ ಕಾರಣ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸಾವು. ಕೇಕ್ ಕಟ್ ಮಾಡಿ, ಹಾರ ತುರಾಯಿ ಹಾಕುವ ಬದಲು ಶಿವಣ್ಣ ಕಡೆಯಿಂದ ಈ ಬಾರಿ ಸಮಾಜ ಸೇವೆ ನಡೆಯಲಿದೆ. ಅವರ ಅಭಿನಯದ ‘ಟಗರು’ ಚಿತ್ರತಂಡ ಹುಟ್ಟುಹಬ್ಬದ ಪ್ರಯುಕ್ತ ಸ್ವಲ್ಪ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದೆ.

ಅಲ್ಲದೆ, ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆಗೂ 1 ಲಕ್ಷ ರೂ. ದೇಣಿಗೆ ನೀಡಿದೆ. ಹೀಗಾಗಿ ಅವರ ಮನೆ ಮುಂದೆ ಈ ಬಾರಿ  ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಾಲು ನಿಲ್ಲಬೇಕಿಲ್ಲ. ಅಮ್ಮನ ಸಾವಿಗೆ ಈ ರೀತಿ ಶಿವಣ್ಣ ಗೌರವ ಸಲ್ಲಿಸಲಿದ್ದಾರೆ.

ಇದನ್ನೂ ಓದಿ.. ಇಂದೇ ಟೀಂ ಇಂಡಿಯಾ ಕೋಚ್ ಘೋಷಣೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೆನ್ನೀಸ್ ತಾರೆ ಜೊಕೋವಿಕ್ - ದೀಪಿಕಾ ಡೇಟಿಂಗ್: ಜೊಕೊ ಮಾಜಿ ಗೆಳತಿ ಹೇಳಿದ್ದೇನು..?