Select Your Language

Notifications

webdunia
webdunia
webdunia
webdunia

ಎಲ್ಲರೂ ಕಾಯುತ್ತಿದ್ದ ಸಾಧಕ ಕೊನೆಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ!

ಎಲ್ಲರೂ ಕಾಯುತ್ತಿದ್ದ ಸಾಧಕ ಕೊನೆಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ!
ಬೆಂಗಳೂರು , ಮಂಗಳವಾರ, 4 ಏಪ್ರಿಲ್ 2023 (09:40 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ಪ್ರೋಮೋ ಬಿಟ್ಟ ಗಳಿಗೆಯಿಂದ ನೆಟ್ಟಿಗರು ಯಾರೆಲ್ಲಾ ಅತಿಥಿಗಳಾಗಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಲೇ ಇದ್ದರು.

ಈ ಕಾರ್ಯಕ್ರಮದಲ್ಲಿ ಸಿನಿಮಾದವರನ್ನೇ ಹೆಚ್ಚು ಕರೆಸಲಾಗುತ್ತಿದೆ ಎಂದೂ ಆರೋಪಗಳಿತ್ತು. ಆದರೆ ಈಗ ಕೊನೆಗೂ ಸಿನಿಮಾ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ, ವೀಕ್ಷಕರು ಬಯಸಿದ್ದ ಸಾಧಕರೇ ಬರುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಮುಂದಿನ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅನೇಕರ ಜೀವನಕ್ಕೆ ಬೆಳಕಾದ ಅವರ  ಜೀವನಗಾಥೆ ಪ್ರೇಕ್ಷಕರಿಗೆ ನಿಜಕ್ಕೂ ಸ್ಪೂರ್ತಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವ ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟ ಚಿತ್ರತಂಡ