Webdunia - Bharat's app for daily news and videos

Install App

ಅತ್ಯಾಚಾರಿಗಳಿಗೆ ಅಂಗಚ್ಛೇದನ ಮಾಡ್ಬೇಕು: ಮೀರಾ ಜಾಸ್ಮಿನ್

Webdunia
ಬುಧವಾರ, 30 ನವೆಂಬರ್ 2016 (08:31 IST)
ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು ಬೆಡಗಿ ಮೀರಾ ಜಾಸ್ಮಿನ್ ಇದೀಗ ಅತ್ಯಾಚಾರಿಗಳ ಬಗ್ಗೆ ಖಡಕ್ ಆಗಿ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಷ್ಟಕ್ಕೂ ಅವರು ಕೊಟ್ಟಿರುವ ಹೇಳಿಕೆಗೆ ಅತ್ಯಾಚಾರಿಗಳು ಬೆಚ್ಚಿಬೀಳುವಂತಾಗಿದೆ. 
 
ರೇಪಿಸ್ಟ್‌ಗಳಿಗೆ ಏನ್ ಶಿಕ್ಷೆ ನೀಡ್ಬೇಕು ಅಂತ ಮೀರಾ ಜಾಸ್ಮಿನ್ ಹೇಳಿರುವುದನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರ. ಇತ್ತೀಚೆಗೆ ಕೇರಳದ ಪೆರುಂಬವೂರಿನಲ್ಲಿ ದಳಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆಯಾದ ಮಹಿಳೆಯ ತಾಯಿಯೊಂದಿಗೆ ಮಾಧ್ಯಮಗಳ ಜೊತೆಗೆ ಮೀರಾ ಜಾಸ್ಮಿನ್ ಮಾತನಾಡುತ್ತಿದ್ದರು. 
 
ಮಹಿಳೆಯ ಮೇಲೆ ಲೈಂಗಿಕ ದಾಳಿ ಮಾಡುವರಿಗೆ ಕ್ಯಾಸ್ಟ್ರೇಷನ್ (ಬೀಜಕೋಶಗಳನ್ನ ಕತ್ತರಿಸಿ ನಪುಂಸಕರನ್ನಾಗಿ ಮಾಡುವುದು) ಮಾಡುವುದೊಂದೇ ಸರಿಯಾದ ಶಿಕ್ಷೆ ಎಂದಿದ್ದಾರೆ. ಅತ್ಯಾಚಾರಿಗಳು ಆ ನೋವನ್ನು ಅನುಭವಿಸಿದಾಗ ಈ ರೀತಿಯ ಘಟನೆಗಳು ಕಡಿಮೆ ಆಗುತ್ತವೆ ಎಂದಿರುವ ಅವರು, ಈಗಿರುವ ಕಾನೂನುಗಳು ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
 
"ಮಹಿಳೆಯರ ಮೇಲೆ ಲೈಂಗಿಕ ದಾಳಿ ಮಾಡುತ್ತಿರುವವರಿಗೆ ನೋವಾಗುವಂತ ಶಿಕ್ಷೆಗಳನ್ನು ಕೊಡುವ ಅವಶ್ಯಕತೆ ಇದೆ. ಅಂತವರಿಗೆ ಕ್ಯಾಸ್ಟ್ರೇಷನ್ ಒಂದೇ ಮಾರ್ಗ. ಆ ರೀತಿಯ ನೋವು ಅನುಭವಿಸುವ ಶಿಕ್ಷೆ ವಿಧಿಸಿದರೆ ಮುಂದೆ ಯಾರೂ ಮಹಿಳೆಯರನ್ನ ತಂಟೆಗ ಬರಲ್ಲ" ಎಂದಿರುವುದು ಚರ್ಚೆಯ ವಿಷಯವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ