Select Your Language

Notifications

webdunia
webdunia
webdunia
webdunia

ಅತ್ಯಾಚಾರಿಗಳಿಗೆ ಅಂಗಚ್ಛೇದನ ಮಾಡ್ಬೇಕು: ಮೀರಾ ಜಾಸ್ಮಿನ್

ಅತ್ಯಾಚಾರಿಗಳಿಗೆ ಅಂಗಚ್ಛೇದನ ಮಾಡ್ಬೇಕು: ಮೀರಾ ಜಾಸ್ಮಿನ್
Kerala , ಬುಧವಾರ, 30 ನವೆಂಬರ್ 2016 (08:31 IST)
ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು ಬೆಡಗಿ ಮೀರಾ ಜಾಸ್ಮಿನ್ ಇದೀಗ ಅತ್ಯಾಚಾರಿಗಳ ಬಗ್ಗೆ ಖಡಕ್ ಆಗಿ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಷ್ಟಕ್ಕೂ ಅವರು ಕೊಟ್ಟಿರುವ ಹೇಳಿಕೆಗೆ ಅತ್ಯಾಚಾರಿಗಳು ಬೆಚ್ಚಿಬೀಳುವಂತಾಗಿದೆ. 
 
ರೇಪಿಸ್ಟ್‌ಗಳಿಗೆ ಏನ್ ಶಿಕ್ಷೆ ನೀಡ್ಬೇಕು ಅಂತ ಮೀರಾ ಜಾಸ್ಮಿನ್ ಹೇಳಿರುವುದನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರ. ಇತ್ತೀಚೆಗೆ ಕೇರಳದ ಪೆರುಂಬವೂರಿನಲ್ಲಿ ದಳಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆಯಾದ ಮಹಿಳೆಯ ತಾಯಿಯೊಂದಿಗೆ ಮಾಧ್ಯಮಗಳ ಜೊತೆಗೆ ಮೀರಾ ಜಾಸ್ಮಿನ್ ಮಾತನಾಡುತ್ತಿದ್ದರು. 
 
ಮಹಿಳೆಯ ಮೇಲೆ ಲೈಂಗಿಕ ದಾಳಿ ಮಾಡುವರಿಗೆ ಕ್ಯಾಸ್ಟ್ರೇಷನ್ (ಬೀಜಕೋಶಗಳನ್ನ ಕತ್ತರಿಸಿ ನಪುಂಸಕರನ್ನಾಗಿ ಮಾಡುವುದು) ಮಾಡುವುದೊಂದೇ ಸರಿಯಾದ ಶಿಕ್ಷೆ ಎಂದಿದ್ದಾರೆ. ಅತ್ಯಾಚಾರಿಗಳು ಆ ನೋವನ್ನು ಅನುಭವಿಸಿದಾಗ ಈ ರೀತಿಯ ಘಟನೆಗಳು ಕಡಿಮೆ ಆಗುತ್ತವೆ ಎಂದಿರುವ ಅವರು, ಈಗಿರುವ ಕಾನೂನುಗಳು ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
 
"ಮಹಿಳೆಯರ ಮೇಲೆ ಲೈಂಗಿಕ ದಾಳಿ ಮಾಡುತ್ತಿರುವವರಿಗೆ ನೋವಾಗುವಂತ ಶಿಕ್ಷೆಗಳನ್ನು ಕೊಡುವ ಅವಶ್ಯಕತೆ ಇದೆ. ಅಂತವರಿಗೆ ಕ್ಯಾಸ್ಟ್ರೇಷನ್ ಒಂದೇ ಮಾರ್ಗ. ಆ ರೀತಿಯ ನೋವು ಅನುಭವಿಸುವ ಶಿಕ್ಷೆ ವಿಧಿಸಿದರೆ ಮುಂದೆ ಯಾರೂ ಮಹಿಳೆಯರನ್ನ ತಂಟೆಗ ಬರಲ್ಲ" ಎಂದಿರುವುದು ಚರ್ಚೆಯ ವಿಷಯವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿಯಲ್ಲಿ ವಿಟಮಿನ್ ’ಸಿ’ಗಾಗಿ ದಿಶಾ ಪಟಾನಿ ಹಾಟ್ ದೃಶ್ಯ