Webdunia - Bharat's app for daily news and videos

Install App

Madenur Manu: ಮಡೆನೂರು ಮನು ಹೇಳಿದ್ದು ನಿಜವೇ ಆದರೆ.. ರೊಚ್ಚಿಗೆದ್ದ ಡಿಬಾಸ್ ಫ್ಯಾನ್ಸ್

Krishnaveni K
ಸೋಮವಾರ, 26 ಮೇ 2025 (11:50 IST)
ಬೆಂಗಳೂರು: ರೇಪ್ ಕೇಸ್ ನಲ್ಲಿ ಬಂಧಿತರಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿ ಮಡೆನೂರು ಮನು ದರ್ಶನ್, ಶಿವಣ್ಣ ವಿರುದ್ಧ ನೀಡಿರುವ ಹೇಳಿಕೆಗಳ ಅಡಿಯೋ ವೈರಲ್ ಆಗುತ್ತಿದ್ದಂತೇ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಡೆನೂರು ಮನು ಹೇಳಿದ್ದು ನಿಜವೇ ಆಗಿದ್ದರೆ ಎಂದು ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
 

ಸಹ ನಟಿ ಮೇಲೆ ರೇಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಅರೆಸ್ಟ್ ಆಗಿದ್ದಾರೆ. ಈ ನಡುವೆ ಅವರದ್ದು ಎನ್ನಲಾದ ಅಡಿಯೋವೊಂದು ವೈರಲ್ ಆಗಿದೆ. ದರ್ಶನ್ ಸತ್ತೋದ, ಶಿವಣ್ಣ ಇನ್ನು ಆರು ವರ್ಷ ಆಮೇಲೆ ನಾನೇ ಹೀರೋ ಎಂದು ಮನು ಕೊಚ್ಚಿಕೊಂಡಿರುವ ಅಡಿಯೋ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಯಾರೋ ದಾರಿಲಿ ಹೋಗೋರೆಲ್ಲಾ ನಮ್ಮ ಅಣ್ಣಂಗೆ ಕಾಂಪಿಟೀಷನ್ ಕೊಡುವ ಹಾಗಾದ್ರಾ? ಮರ್ಡರ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆಯೂ ಅವರ ಜನಪ್ರಿಯತೆ ಕಮ್ಮಿಯಾಗಿಲ್ಲ. ಅಂದ ಮೇಲೆ ಈ ನಟನೆಲ್ಲಾ ಯಾವ ಲೆಕ್ಕ ಎಂದು ಎಂದು ಡಿಬಾಸ್ ಫ್ಯಾನ್ಸ್ ರೊಚ್ಚಿಗೆದ್ದು ಕಾಮೆಂಟ್ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ, ಮಡೆನೂರು ಮನು ವಿರುದ್ಧ ದೂರು ಕೂಡಾ ದಾಖಲಿಸಿದ್ದಾರೆ. ಮನು ವಿರುದ್ಧ ಶಿವಣ್ಣ ಪರವಾಗಿ ಡಾ. ರಾಜ್ ಕುಟುಂಬದ ಅಭಿಮಾನಿ ಸಂಘದವರು ಮತ್ತು ದರ್ಶನ್ ಪರವಾಗಿ ಅವರ ಅಭಿಮಾನಿಗಳು ಒಂದಾದ ಮೇಲೊಂದರಂತೆ ಕೇಸ್ ದಾಖಲಿಸುತ್ತಿದ್ದಾರೆ. ಇದರಿಂದಾಗಿ ಈಗ ಮನು ಮೇಲೆ ರೇಪ್ ಕೇಸ್ ಜೊತೆಗೆ ನೂರಾರು ಕೇಸ್ ಗಳು ಜಡಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments