Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ
Bangalore , ಶುಕ್ರವಾರ, 4 ಆಗಸ್ಟ್ 2017 (11:34 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ ಭಾನುವಾರ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದುಬರಲಿದೆ.

 
ಅದ್ದೂರಿ ವೆಚ್ಚದಲ್ಲಿ ಮುನಿರತ್ನ ನಿರ್ಮಿಸುತ್ತಿರುವ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಿಎಂ ಜತೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವೆ ಉಮಾಶ್ರೀ ಇರಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ರವಿಚಂದ್ರನ್, ಅಂಬರೀಷ್,  ಅರ್ಜುನ್ ಸರ್ಜಾ, ಶ್ರೀನಾಥ್,  ರವಿಶಂಕರ್,  ಶಶಿಕುಮಾರ್, ಲಕ್ಷ್ಮೀ, ಸ್ನೇಹಾ ಸೇರಿದಂತೆ ಬಹುತಾರಾಗಣವಿದೆ.

ಇದನ್ನೂ ಓದಿ.. ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಸಿಬಿಸಿ ಲೈಂಗಿಕ ದೃಶ್ಯಗಳಿಂದ ಈ ಚಿತ್ರದ 48 ದೃಶ್ಯಗಳು ಕಟ್