Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರ ಬಿಟ್ಟು ತಮಿಳು ಚಿತ್ರದತ್ತ ಸಂಯುಕ್ತಾ ಹೆಗಡೆ..?

ಕನ್ನಡ ಚಿತ್ರ ಬಿಟ್ಟು ತಮಿಳು ಚಿತ್ರದತ್ತ ಸಂಯುಕ್ತಾ ಹೆಗಡೆ..?
ಬೆಂಗಳೂರು , ಸೋಮವಾರ, 8 ಮೇ 2017 (16:03 IST)
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ಸಂಯುಕ್ತಾ ಹೆಗಡೆ ವಿವಾದಕ್ಕೆ ಸಿಲುಕಿದ್ದಾರೆ. ಕನ್ನಡದ ಕಾಲೇಜ್ ಹೀರೋ ಚಿತ್ರವನ್ನ ಒಪ್ಪಿಕೊಂಡಿದ್ದ ಸಂಯುಕ್ತಾ ಹೆಗಡೆ ತಮಿಳಿನಲ್ಲಿ ಚಾನ್ಸ್ ಸಿಕ್ಕಿದೆ ಎಂದು ಕನ್ನಡ ಚಿತ್ರಕ್ಕೆ ಕೈಕೊಟ್ಟು ಕಾಲಿವುಡ್`ಗೆ ಹಾರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತಂತೆ ಖಾಸಗಿ ಚಾನಲ್ ಜೊತೆ ಮಾತನಾಡಿರುವ ನಿರ್ಮಾಪಕರು ಲಕ್ಷ ಲಕ್ಷ ಹಣ ಖರ್ಚು ಮಾಡಿ ಫೋಟೋ ಶೂಟ್ ಮಾಡಿಸಿದ್ದೇನೆ. ಆದರೆ, ತಮಿಳು ಚಿತ್ರದ ಆಫರ್ ಸಿಕ್ಕಿದೆ ಎಂದು ಸಂಯುಕ್ತಾ ಅಲ್ಲಿಗೆ ತೆರಳುತ್ತಿದ್ದಾರೆ. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವಂತೆ ನಿರ್ದೇಶಕರು ಹೇಳಿದ ಬುದ್ಧಿಮಾತನ್ನೂ ಕೇಳಿಲ್ಲ. ಫಿಲ್ಮ್ ಚೇಂಬರ್ ಮುಂದೆ ನಾವು ನ್ಯಾಯ ಕೇಳುತ್ತೇವೆ ಎಂದು ನಿರ್ಮಾಪಕ ಪದ್ಮನಾಭ್ ಹೇಳಿದ್ದಾರೆ.

ತಮಿಳಿನಲ್ಲಿ ಪ್ರಭುದೇವ ನಟಿಸಲು ಸಂಯುಕ್ತಾ ಹೆಗಡೆಗೆ ಆಫರ್ ಬಂದಿದೆ ಎನ್ನಲಾಗಿದೆ. ಅಲೆಮಾರಿ ಸಂತು ನಿರ್ದೆಶನದ ಕಾಲೇಜ್ ಕುಮಾರ್ ಚಿತ್ರದಲ್ಲಿ ಕೆಂಪಸಂಪಿಗೆ ವಿಕ್ಕಿ ನಾಯಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಿರ್ದೇಶಕರ ಮೇಲೆ ತಮನ್ನಾ ಮುನಿಸು!