Webdunia - Bharat's app for daily news and videos

Install App

`ಗಂಟುಮೂಟೆ’ಯೊಳಗಿನ ಬೆರಗನ್ನು ಮೆಚ್ಚಿಕೊಂಡ ಕಿಚ್ಚ!

Webdunia
ಶನಿವಾರ, 12 ಅಕ್ಟೋಬರ್ 2019 (18:06 IST)
ಕೆಲ ದಿನಗಳ ಹಿಂದಷ್ಟೇ ಗಂಟುಮೂಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಹದಿಹರೆಯದ ಹೊಸ್ತಿಲಲ್ಲಿರೋ ಹುಡುಗಿಯೊಬ್ಬಳ ದೃಷ್ಟಿಯಲ್ಲಿ ತೆರೆದುಕೊಳ್ಳೋ ಈ ಕಥೆಯ ಸುಳಿವಿಗೆ, ಅದು ಮೂಡಿ ಬಂದಿದ್ದ ರೀತಿಗೆ ಪ್ರೇಕ್ಷಕರೆಲ್ಲ ಖುಷಿಗೊಂಡಿದ್ದರು. ಈ ಮೂಲಕ ರೂಪಾ ರಾವ್ ಮೂಲಕ ಭರವಸೆಯ ಮಹಿಳಾ ನಿರ್ದೇಶಕಿಯ ಆಗಮನವಾದ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಗೋಚರಿಸಿದ್ದವು. ಇದೀಗ ಈ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಕೂಡಾ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
ಚಿತ್ರೀಕರಣವೂ ಸೇರಿದಂತೆ ಅದೆಷ್ಟೇ ಬ್ಯುಸಿಯಾಗಿದ್ದರೂ ಕೂಡಾ ಹೊಸಾ ಬಗೆಯ ಪ್ರಯತ್ನಗಳತ್ತ ಸುದೀಪ್ ಸದಾ ಕಣ್ಣಾಗಿರುತ್ತಾರೆ. ಅವುಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ ಬೆಂಬಲವಾಗಿ ನಿಲ್ಲುತ್ತಾರೆ. ಅದೇ ರೀತಿ ಹೊಸಾ ಅಲೆಯ ಚಿತ್ರವಾಗಿ ಪರಿಗಣಿಸಲ್ಪಟ್ಟಿರೋ ಗಂಟುಮೂಟೆಯ ಟ್ರೇಲರ್ ಅನ್ನು ನೋಡಿ ಈ ಬಗ್ಗೆ ಟ್ವಿಟರ್ ಮೂಲಕ ಸುದೀಪ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಂದು ಸಣ್ಣ ಟ್ರೈಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದು ಅದ್ಭುತ ಚಿಂತನೆಯನ್ನು ಸೂಚಿಸುವಂತಿದೆ. ಇಂಥ ಒಳ್ಳೆ ಪ್ರಯತ್ನವನ್ನು ಬೆಂಬಲಿಸಿ ಎಂದಿರೋ ಸುದೀಪ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
 
ಸುದೀಪ್ರಂಥಾ ಸ್ಟಾರ್ ನಟರೇ ಮೆಚ್ಚಿಕೊಂಡು ಮಾತಾಡಿರೋದರಿಂದ ಗಂಟುಮೂಟೆಯ ಹವಾ ಮತ್ತಷ್ಟು ತೀವ್ರವಾಗಿದೆ. ಹೈಸ್ಕೂಲು ಪ್ರೇಮಕಥೆಯನ್ನೊಳಗೊಂಡಿರೋ ಈ ಚಿತ್ರ ತೊಂಭತ್ತರ ದಶಕದ ಹದಿಹರೆಯದ ಮನಸ್ಥಿತಿಗೆ ಕನ್ನಡಿ ಹಿಡಿಯುವಂಥಾ ಕಥಾ ಹಂದರದೊಂದಿಗೆ ರೂಪುಗೊಂಡಿದೆ. ಸಾಮಾನ್ಯವಾಗಿ ಯಾವುದೇ ಪ್ರೇಮ ಕಥೆಗಳಾದರೂ ಹುಡುಗನ ದೃಷ್ಟಿಕೋನದಿಂದ ನಿರೂಪಣೆಯಾಗುತ್ತದೆ. ಆದರೆ ಇಲ್ಲಿ ಹೆಣ್ಣೊಬ್ಬಳ ದೃಷ್ಟಿಯಿಂದ ಅದನ್ನು ನಿರೂಪಿಸಲಾಗಿದೆ. ಕಥೆಯ ಕಸುವಿನಿಂದಲೇ ಅಂಥಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನ ಕಂಡಿರುವ ಈ ಚಿತ್ರ ಹೊಸಾ ಅಲೆಯ ಕಮರ್ಶಿಯಲ್ ಶೈಲಿಯದ್ದು. ಈ ಟ್ರೇಲರ್ ಕಾರಣದಿಂದಲೇ ಇದೀಗ ಪ್ರೇಕ್ಷಕರ ನಡುವೆ ಚರ್ಚೆಯಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments