Select Your Language

Notifications

webdunia
webdunia
webdunia
webdunia

ಜ್ವರದಿಂದ ಚೇತರಿಸಿಕೊಂಡ ಬೆನ್ನಲ್ಲೇ ಮುಂಬೈನಲ್ಲಿ ಪ್ರತ್ಯಕ್ಷರಾದ ಕಿಚ್ಚ ಸುದೀಪ್

ಜ್ವರದಿಂದ ಚೇತರಿಸಿಕೊಂಡ ಬೆನ್ನಲ್ಲೇ ಮುಂಬೈನಲ್ಲಿ ಪ್ರತ್ಯಕ್ಷರಾದ ಕಿಚ್ಚ ಸುದೀಪ್
ಬೆಂಗಳೂರು , ಶನಿವಾರ, 23 ಜುಲೈ 2022 (09:40 IST)
ಬೆಂಗಳೂರು: ವಿಕ್ರಾಂತ್ ರೋಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ ಸುದೀಪ್ ಗೆ ಜ್ವರ ಕಾಣಿಸಿಕೊಂಡಿತ್ತು. ಇದು ಮಾಮೂಲು ಜ್ವರವಾಗಿದ್ದರಿಂದ ಚೇತರಿಸಿಕೊಂಡ ತಕ್ಷಣವೇ ಕಿಚ್ಚ ಫೀಲ್ಡಿಗಿಳಿದಿದ್ದಾರೆ.

ಜುಲೈ 28 ರಂದು ವಿಕ್ರಾಂತ್ ರೋಣ ಬಹುಭಾಷೆಯಲ್ಲಿ ರಿಲೀಸ್ ಆಗಲಿದ್ದು, ಸಿನಿಮಾ ಸಕ್ಸಸ್ ಗಾಗಿ ಕಿಚ್ಚ ಬೇರೆ ಬೇರೆ ಊರುಗಳಿಗೆ ಭೇಟಿ ಕೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಜ್ವರದಿಂದಾಗಿ ಅವರ ನಿಗದಿತ ಕಾರ್ಯಕ್ರಮಗಳಿಗೆ ತೊಂದರೆಯಾಗಿತ್ತು.

ಇದೀಗ ಚೇತರಿಸಿಕೊಂಡು ಪತ್ನಿ ಪ್ರಿಯಾ ಜೊತೆಗೆ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈ, ದೆಹಲಿ, ಚೆನ್ನೈನಲ್ಲಿ ವಿಕ್ರಾಂತ್ ರೋಣ ಪ್ರಮೋಷನ್ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣನ ಜೊತೆ ಪುನೀತ್ ಕಟೌಟ್