ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಪುನೀತ್ ಮೃತಪಟ್ಟಿದ್ದರು. ಸದಾ ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆ ಇರಲಿ, ಯಾವುದೇ ಕಾರ್ಯಕ್ರಮವಿರಲಿ ಜತೆಯಲ್ಲೇ ಇರುತ್ತಿದ್ದ ಪುನೀತ್ ಆರ್ಯ ನಿಧನಕ್ಕೆ ಕಿಚ್ಚನ ಅಭಿಮಾನಿಗಳ ಬಳಗವೇ ಕಂಬನಿ ಮಿಡಿದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ‘ಈ ಅದ್ಭುತ ವ್ಯಕ್ತಿ ಈಗ ಜತೆಗಿಲ್ಲ ಎಂದು ಹೇಳಲು ದುಃಖವಾಗುತ್ತದೆ. ನನಗೆ ಆತ ಕೇವಲ ಅಭಿಮಾನಿಯಲ್ಲ, ಹಲವು ವರ್ಷಗಳಿಂದ ಸಹೋದರನಂತಿದ್ದ. ತುಂಬಾ ದುಃಖವಾಗುತ್ತಿದೆ. ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.