Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ"

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ
Bangalore , ಸೋಮವಾರ, 6 ಮಾರ್ಚ್ 2017 (16:27 IST)
ವಿಭಿನ್ನ ಶೀರ್ಷಿಕೆಯ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಚಿತ್ರೀಕರಣವು ಈಗ ಬಹುತೇಕ ಸಂಪೂರ್ಣಗೊಂಡಿದೆ. 60 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶ್ರೀರಂಗಪಟ್ಟಣ ಸುತ್ತಮುತ್ತ ಹಲವಾರು ಸನ್ನಿವೇಶಗಳನ್ನು ಜೊತೆಗೆ ಎರಡು ಗೀತೆಗಳನ್ನು ರಿಷಿಕೇಶ್ ಛಾಯಾಗ್ರಹಣದಲ್ಲಿ ನಿರ್ದೇಶಕ ಕುಶಾಲ್ ಚಿತ್ರಿಸಿಕೊಂಡರು.
 
ಐದು ದಿನಗಳ ಕಾಲ ಚಿತ್ರೀಕರಣ ಬಾಕಿ ಉಳಿದಿದ್ದು, ಬರುವ ವಾರದಿಂದ ಮಾತಿನ ಮರುಲೇಪನ ಕಾರ್ಯ ನಡೆಯಲಿದೆ ಎಂದು ನಿರ್ಮಾಪಕ ರಂಜಿತ್‍ಗೌಡ ತಿಳಿಸಿದ್ದಾರೆ. ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಹಣ, ಕುಶಾಲ್, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯ, ಶ್ರೀಕಾಂತ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರಘುಕುಮಾರ್ ಸಾಹಸ ವೀರಣ್ಣ ನಿರ್ಮಾಣ ನಿರ್ವಹಣೆಯಿದೆ.
 
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಕುಶಾಲ್ ಹೊತ್ತಿದ್ದಾರೆ.  ತಾರಾಗಣದಲ್ಲಿ ಅವಿನಾಶ್, ಕೃಷಿ ಕಪಾಂಡ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ ಮೇಷ್ಟ್ರು, ನಾಗರಾಜ್‍ಮೂರ್ತಿ, ಜಯಶ್ರೀ ಎಂ.ಎಸ್. ಉಮೇಶ್, ಸುಚೇಂದ್ರ ಪ್ರಸಾದ್, ಡಾ. ಕಿಂಗ್‍ಮೋಹನ್ ಮುಂತಾದವರಿದ್ದಾರೆ. ಶ್ರೀ ಚಾಮುಂಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಡಿಯಲ್ಲಿ ರಂಜಿತ್‍ಗೌಡ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇದೇ ಮಾ.13ರಿಂದ ಜೀ ಕನ್ನಡ ಭಿನ್ನ ಧಾರಾವಾಹಿ ಜೋಡಿಹಕ್ಕಿ