Webdunia - Bharat's app for daily news and videos

Install App

Kamal Haasan: ಕ್ಷಮೆ ಕೇಳಿ ಎಂದರೆ ಇಷ್ಟುದ್ದ ಪತ್ರ ಬರೆದ ಕಮಲ್ ಹಾಸನ್ ಹೇಳಿದ್ದೇನು

Krishnaveni K
ಮಂಗಳವಾರ, 3 ಜೂನ್ 2025 (13:21 IST)
Photo Credit: X
ಬೆಂಗಳೂರು: ಕನ್ನಡಿಗರ ಭಾವನೆಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಕೇಳಿ ಎಂದು ಕೇಳಿದ್ದಕ್ಕೆ ಬಹುಭಾಷಾ ನಟ ಕಮಲ್ ಹಾಸನ್ ಫಿಲಂ ಚೇಂಬರ್ ಗೆ ಇಷ್ಟುದ್ದ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ನೋಡಿ.

ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದ ಸೃಷ್ಟಿಸಿದ್ದರು. ಹೀಗಾಗಿ ಇಂದು 12 ಗಂಟೆಯೊಳಗೆ ಕ್ಷಮೆ ಕೇಳದೇ ಇದ್ದರೆ ಅವರ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿತ್ತು.

ಆದರೆ ಕ್ಷಮೆ ಕೇಳುವ ಬದಲು ಇಂದು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹುಲು ಅವರಿಗೆ ಕಮಲ್ ಹಾಸನ್ ಸುದೀರ್ಘ ಪತ್ರ ಬರೆದಿದ್ದಾರೆ. ‘ತಮಿಳಿನ ರೀತಿಯಲ್ಲೇ ಕನ್ನಡಕ್ಕೂ ಶ್ರೀಮಂತ ಸಂಸ್ಕೃತಿ ಇತಿಹಾಸವಿದ್ದು, ಅದನ್ನು ನಾನು ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು ನನ್ನ ವೃತ್ತಿ ಜೀವನದಲ್ಲಿ ನೀಡಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಅಭಿಮಾನ ಸ್ಪಟಿಕದಂತದ್ದು. ಅದನ್ನು ನಾನು ಭೀತಿ ಇಲ್ಲದೇ ಹೇಳುವೆ. ಅದರಂತೆ ಕನ್ನಡಿಗರಿಗೂ ಅವರ ಭಾಷೆಯ ಬಗ್ಗೆ ಅದಮ್ಯ ಪ್ರೀತಿಯಿರುವ ಬಗ್ಗೆ ನನಗೂ ಗೌರವವಿದೆ. ಭಾಷೆಗಳ ಸಮಾನ ಗೌರವಕ್ಕಾಗಿ ನಾನು ಸದಾ ಒತ್ತಾಯಿಸಿದ್ದೇನೆ.  ಯಾವುದೇ ಒಂದು ಭಾಷೆಯ ಹೇರಿಕೆ ಮತ್ತು ಇನ್ನೊಂದು ಭಾಷೆಯ ಮೇಲೆ ದೌರ್ಜನ್ಯವನ್ನೂ ನಾನು ವಿರೋಧಿಸುತ್ತಾ ಬಂದಿದ್ದೇನೆ.  ನನಗೆ ಸಿನಿಮಾ ಭಾಷೆ ಗೊತ್ತು. ನಾನು ಅದನ್ನೇ ಮಾತನಾಡುತ್ತೇನೆ. ಅದು ವಿಶ್ವವ್ಯಾಪಿ. ಅದಕ್ಕೆ ಪ್ರೀತಿಸುವುದು ಮಾತ್ರ ಗೊತ್ತು. ನನ್ನ ಹೇಳಿಕೆ ಕೂಡಾ ನಮ್ಮ ನಡುವೆ ಇರುವ ಪ್ರೀತಿ, ಬಾಂಧವ್ಯವನ್ನು ತೋರ್ಪಡಿಸುವ ಉದ್ದೇಶವಿತ್ತೇ ವಿನಹ ಬೇರೇನೂ ಅಲ್ಲ. ಅದೇ ಪ್ರೀತಿಯ ಭಾಗವಾಗಿ ಶಿವಣ್ಣ ಅಡಿಯೋ ಲಾಂಚ್ ಗೆ ಬಂದಿದ್ದರು. ಆದರೆ ಅದರಿಂದಾಗಿ ಅವರು ಮುಜುಗರಕ್ಕೊಳಗಾಗಿದ್ದಕ್ಕೆ ನನಗೆ ಬೇಸರವಿದೆ.  ಆದರೆ ನಮ್ಮಿಬ್ಬರ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿದೆ.

ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ ಕರ್ನಾಟಕದ ಬಗ್ಗೆ, ಅದರ ಜನರ ಬಗ್ಗೆ ಮತ್ತು ಭಾಷೆಯ ಬಗ್ಗೆ ನನಗಿರುವ ನಿರಂತರ ಪ್ರೀತಿಯನ್ನು ಗುರುತಿಸಲಾಗುವುದು ಎಂದು ಪ್ರಾಮಾಣಿಕವಾಗಿ ಭಾವಿಸಿದ್ದೇನೆ.  ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ಪರಸ್ಪರ ಪ್ರೀತಿ, ಗೌರವವನ್ನು ಎತ್ತಿ ಹಿಡಿಯಲು ಒಂದು ಅವಕಾಶ ಎಂದು ನಾನು ನಂಬುತ್ತೇನೆ’ ಎಂದು ಕಮಲ್ ಸುದೀರ್ಘ ಪತ್ರ ಬರೆದಿದ್ದಾರೆ. ಆದರೆ ಪತ್ರದಲ್ಲಿ ನನ್ನ ಹೇಳಿಕೆ ತಪ್ಪಾಗಿ ಗ್ರಹಿಸಲಾಗಿದೆ ಎಂದಿದ್ದಾರೆಯೇ ಹೊರತು ಎಲ್ಲೂ ಕ್ಷಮೆ ಕೇಳಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಮುಂದಿನ ಸುದ್ದಿ
Show comments