ತವರು ಉಡುಪಿಗೆ ಬಂದ ಜ್ಯೂ ಎನ್ ಟಿಆರ್, ರಿಷಬ್ ಶೆಟ್ಟಿ ಸಾಥ್: ವಿಡಿಯೋ ನೋಡಿ

Krishnaveni K
ಶನಿವಾರ, 31 ಆಗಸ್ಟ್ 2024 (16:03 IST)
Photo Credit: X
ಉಡುಪಿ: ತೆಲುಗು ಸೂಪರ್ ಸ್ಟಾರ್ ಜ್ಯೂ.ಎನ್ ಟಿಆರ್ ಇಂದು ತಮ್ಮ ಮೂಲ ಊರು ಉಡುಪಿಗೆ ಬಂದಿದ್ದು, ಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡಾ ಅವರಿಗೆ ಸಾಥ್ ನೀಡಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಜ್ಯೂ ಎನ್ ಟಿಆರ್ ತಾಯಿಯ ಊರು ಉಡುಪಿ. ಇದೀಗ ತಮ್ಮ ತಾಯಿ, ಪತ್ನಿಯೊಂದಿಗೇ ಕೃಷ್ಣನ ನಗರಿ ಉಡುಪಿಗೆ ಬಂದಿದ್ದಾರೆ. ಈ ವೇಳೆ ಕೃಷ್ಣ ಮಠಕ್ಕೆ ಬಂದ ಅವರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಜ್ಯೂ ಎನ್ ಟಿಆರ್ ನೋಡಲು ಸಾಕಷ್ಟು ಜನ ಸೇರಿದ್ದರು.

Photo Credit: X
ದೇವಾಲಯದೊಳಗೂ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಹಾಗಿದ್ದರೂ ಜ್ಯೂ ಎನ್ ಟಿಆರ್ ಮತ್ತು ಕುಟುಂಬ ಸುಗಮವಾಗಿ ದೇವರ ದರ್ಶನ ಮಾಡಿಕೊಂಡು ತೆರಳಿದೆ. ಇನ್ನು, ಜ್ಯೂ ಎನ್ ಟಿಆರ್ ಕುಟುಂಬಕ್ಕೆ ರಿಷಬ್ ಶೆಟ್ಟಿ ಕೂಡಾ ಸಾಥ್ ನೀಡಿದ್ದಾರೆ. ರಿಷಬ್ ಮತ್ತು ಜ್ಯೂ ಎನ್ ಟಿಆರ್ ಗೆ ಉತ್ತಮ ಬಾಂಧವ್ಯವಿದೆ.

ಇದೀಗ ರಿಷಬ್ ಕಾಂತಾರ ಶೂಟಿಂಗ್ ಗಾಗಿ ಉಡುಪಿಯಲ್ಲೇ ಬೀಡುಬಿಟ್ಟಿದ್ದಾರೆ. ಹೀಗಾಗಿ ತಮ್ಮ ಗೆಳೆಯನನ್ನು ತಾವೇ ವಿಮಾನ ನಿಲ್ದಾಣದಲ್ಲಿ ರಿಸೀವ್ ಮಾಡಿ ದೇವಾಲಯ ದರ್ಶನ ಮಾಡಿಸಿದ್ದಾರೆ. ಇಬ್ಬರೂ ಘಟಾನುಘಟಿ ಸ್ಟಾರ್ ಗಳು ಬಂದಿದ್ದರಿಂದ ಜನ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

ಮುಂದಿನ ಸುದ್ದಿ
Show comments