Webdunia - Bharat's app for daily news and videos

Install App

ಜೋಡಿಹಕ್ಕಿ ಧಾರವಾಹಿ ಹೀರೋ ನಟ ತಾಂಡವ್ ರಾಮ್ ಅರೆಸ್ಟ್

Krishnaveni K
ಮಂಗಳವಾರ, 19 ನವೆಂಬರ್ 2024 (13:46 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿಹಕ್ಕಿ ಧಾರವಾಹಿಯ ಹೀರೋ ಆಗಿದ್ದ ನಟ ತಾಂಡವ್ ರಾಮ್ ಕೊಲೆಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಚಂದ್ರಾ ಲೇಔಟ್ ನ ಮನೆ ಕಮ್ ಕಚೇರಿಯಲ್ಲಿ ಘಟನೆ ನಡೆದಿದೆ. ನಿರ್ದೇಶಕ ಭರತ್ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ತಾಂಡವ್ ರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ನಿರ್ದೇಶನದಲ್ಲಿ ತಾಂಡವ್ ರಾಮ್ ಹೀರೋ ಆಗಿ ಸಿನಿಮಾ ಮಾಡಲು ಹೊರಟಿದ್ದರು. ಆದರೆ ಸಿನಿಮಾ ಇನ್ನೂ ಸೆಟ್ಟೇರದ ಕಾರಣ ಹತಾಶೆಗೊಂಡು ತಾಂಡವ್ ರಾಮ್ ಈ ಕೃತ್ಯಕ್ಕೆ ಮುಂದಾಗಿದ್ದಾರೆ.

ಮುಗಿಲ್ ಪೇಟೆ ಸಿನಿಮಾ ಖ್ಯಾತಿಯ ನಿರ್ದೇಶಕ ಭರತ್ ಎಂಬವರ ಮೇಲೆ ಕೊಲೆ ಯತ್ನ ನಡೆಸಿದ್ದಾರೆ. ಸಿನಿಮಾಗಾಗಿ ತಾಂಡವ್ ಸುಮಾರು 6-7 ಲಕ್ಷ ರೂ. ಹಣವನ್ನೂ ನೀಡಿದ್ದರು. ಆದರೆ ಸಿನಿಮಾ ಸೆಟ್ಟೇರಿ ತುಂಬಾ ಸಮಯವಾದರೂ ಇನ್ನೂ ಸಿನಿಮಾ ಮುಗಿಸಿರಲಿಲ್ಲ. ಸಿನಿಮಾ ಕೆಲಸ ಮುಗಿಯದೇ ತನ್ನ ಕೆರಿಯರ್ ಹಾಳಾಗಿದೆ ಎಂಬುದು ತಾಂಡವ್ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೇ ವಿಚಾರವಾಗಿ ಇಬ್ಬರ ನಡುವೆ ಚಂದ್ರಾ ಲೇ ಔಟ್ ನಲ್ಲಿರುವ ಮನೆಯಲ್ಲಿ ಗಲಾಟೆಯಾಗಿದೆ. ಈ ವೇಳೆ ತಾಂಡವ್ ತನ್ನ ಕಾರಿನಲ್ಲಿ ಸಿಂಗಲ್ ಬ್ಯಾರಲ್ ಗನ್ ತೆಗೆದುಕೊಂಡು ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆಗೆ ಯತ್ನಿಸಿದ್ದಾನೆ. ಈ ಘಟನೆ ಸಂಬಂಧಟ್ಟಂತೆ ತಾಂಡವ್ ನನ್ನು ಅರೆಸ್ಟ್ ಮಾಡಲಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಜೋಡಿಹಕ್ಕಿ ಧಾರವಾಹಿ ಮೂಲಕ ಖ್ಯಾತಿ ಪಡೆದಿದ್ದ ತಾಂಡವ್ ಬಳಿಕ ಅದೇ ವಾಹಿನಿಯಲ್ಲಿ ಭೂಮಿಗೆ ಬಂದ ಭಗವಂತ ಎಂಬ ಧಾರವಾಹಿಯನ್ನೂ ನಿರ್ಮಿಸಿದ್ದರು. ಈ ನಡುವೆ ಎರಡು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ

ಟಿವಿಕೆ ರಾಲಿಯಲ್ಲಿ ಕಾಲ್ತುಳಿತ: ವಿಜಯ್ ಫ್ಯಾನ್ಸ್ ದೂರುತ್ತಿರುವುದು ಈಗ ಇವರನ್ನೇ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಮುಂದಿನ ಸುದ್ದಿ
Show comments