ಬೆಂಗಳೂರು: ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆ ಅದ್ಧೂರಿಯಾಗಿ ಮಾಡಿ ಸುದ್ದಿಯಾಗಿದ್ದರು. ಇದೀಗ ಅವರ ಪುತ್ರನೂ ಸುದ್ದಿಯಲ್ಲಿದ್ದಾರೆ. ರೆಡ್ಡಿ ಪುತ್ರ ಕಿರೀಟಿ ಸಿನಿ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಎಂಬುದು ಲೇಟೆಸ್ಟ್ ಸುದ್ದಿ.
ಅಕ್ಕ ಬ್ರಹ್ಮಿಣಿಯ ವಿವಾಹ ಕಾರ್ಯಕ್ರಮದಲ್ಲಿ ಕಿರೀಟಿ ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಾರೆ ಎಂದು ಗುಸು ಗುಸು ಹರಡಿತ್ತು. ಆತ ಡ್ಯಾನ್ಸ್ ಮೂಲಕ ನೆರೆದಿದ್ದವರಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು.
ಮುಂದಿನ ವರ್ಷ ಕಿರೀಟಿ ಸಿನಿಮಾ ರಂಗಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದೆ. ಆತನ ಆಯ್ಕೆ ತೆಲುಗು ಚಿತ್ರರಂಗವಿರಬಹುದು ಎಂದೂ ಹೇಳುವವರಿದ್ದಾರೆ. ಈಗಾಗಲೇ ಕರ್ನಾಟಕದ ರಾಜಕಾರಣಿಗಳ ಪೈಕಿ ಕುಮಾರಸ್ವಾಮಿ, ಚೆಲುವರಾಯ ಸ್ವಾಮಿ, ರೇವಣ್ಣ ಪುತ್ರರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಜನಾರ್ಧನ ರೆಡ್ಡಿ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ