Select Your Language

Notifications

webdunia
webdunia
webdunia
webdunia

ರಣಧೀರ ಕಾರ್ಯಕ್ರಮಕ್ಕೆ ಒಳಗೂ ಬಿಡಲಿಲ್ಲ! ಹಳೆಯ ನೆನಪು ಹಂಚಿಕೊಂಡ ಜಗ್ಗೇಶ್

ರಣಧೀರ ಕಾರ್ಯಕ್ರಮಕ್ಕೆ  ಒಳಗೂ ಬಿಡಲಿಲ್ಲ! ಹಳೆಯ ನೆನಪು ಹಂಚಿಕೊಂಡ ಜಗ್ಗೇಶ್
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (11:50 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ರಣಧೀರ ಸಿನಿಮಾದಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಕಾಲದ ಘಟನೆಯೊಂದನ್ನು ಜಗ್ಗೇಶ್ ಈಗ ಸ್ಮರಿಸಿಕೊಂಡಿದ್ದಾರೆ.


1987 ರಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ರಣಧೀರ ಸಿನಿಮಾದ 25 ನೇ ವಾರದ ಸಂಭ್ರಮದ ಕಾರ್ಯಕ್ರಮಕ್ಕೆ ತಮ್ಮನ್ನು ಪೊಲೀಸರು ಒಳ ಬಿಟ್ಟಿರಲಿಲ್ಲ. ಆವತ್ತು ಮ್ಯಾನೇಜರ್ ಮಧ್ಯಪ್ರವೇಶಿಸಿ ನಮ್ಮನ್ನು ಒಳಬಿಟ್ಟಿದ್ದರು.

ಆ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಮುಖ್ಯ ಅತಿಥಿಯಾಗಿದ್ದರು. ನಾನು, ಪರಿಮಳ ಹೋದಾಗ ನಮ್ಮನ್ನು ಪೊಲೀಸರು ಒಳಬಿಡಲಿಲ್ಲ.ಇಂದಿಗೆ 33 ವರ್ಷವಾಗಿದೆ. ಅಂದು ಗುರುತು ಹಿಡಿಯದವರ ಮಧ್ಯದಿಂದ ಎದ್ದು ಬಂದು ಇಂದು 150 ಚಿತ್ರಗಳಲ್ಲಿ ನಾಯಕನಟನಾಗಿ ನಿಂತಿರುವೆ. ಎಲ್ಲವೂ ರಾಯರ ಆಶೀರ್ವಾದ ಎಂದು ಜಗ್ಗೇಶ್ ನೆನೆಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ಪುತ್ರ ವಿಕ್ರಮ್ ಚೊಚ್ಚಲ ಸಿನಿಮಾದ ಟೀಸರ್ ಲಾಂಚ್