Select Your Language

Notifications

webdunia
webdunia
webdunia
webdunia

ಪುನೀತ್ ಆತ್ಮಕ್ಕೆ ಸಂತೋಷದ ಮಜ್ಜನ ಮಾಡಿ: ಜಗ್ಗೇಶ್ ಕರೆ

ಪುನೀತ್ ಆತ್ಮಕ್ಕೆ ಸಂತೋಷದ ಮಜ್ಜನ ಮಾಡಿ: ಜಗ್ಗೇಶ್ ಕರೆ
ಬೆಂಗಳೂರು , ಬುಧವಾರ, 9 ಮಾರ್ಚ್ 2022 (10:08 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್. ಇದೇ ಕೊನೇ ಬಾರಿಗೆ ಅಭಿಮಾನಿಗಳಿಗೆ ಅವರ ಸಿನಿಮಾ ಬಿಡುಗಡೆಯ ಸಂಭ್ರಮಾಚರಿಸಲು ಅವಕಾಶ ಸಿಗುತ್ತಿದೆ. ಇದು ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಬೇಸರವನ್ನೂ ಉಂಟು ಮಾಡಿದೆ.

ಹೀಗಾಗಿ ಕೊನೆಯ ಬಾರಿಗೆ ತಮ್ಮ ಮೆಚ್ಚಿನ ಅಪ್ಪುವನ್ನು ತೆರೆ ಮೇಲೆ ಸಂಭ್ರಮಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಈ ನಡುವೆ ನವರಸನಾಯಕ ಜಗ್ಗೇಶ್ ಪುನೀತ್ ಅಭಿಮಾನಿಗಳಿಗೆ ವಿಶೇಷ ಕರೆ ಕೊಟ್ಟಿದ್ದಾರೆ. ‘ಆತ್ಮೀಯ ಹೃದಯದ ಕೊನೆಯ ಕಲಾಕೃತಿಗೆ ಕನ್ನಡದ ಮನಗಳು ಮನದುಂಬಿ ಹರಸಿಬಿಡಿ. ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಸಂತೋಷದ ಮಜ್ಜನವಾಗಲಿ. ನಮ್ಮಗಳಿಗೆ ಕಲಾಸಂತೋಷ ನೀಡಿಹೋದ ಅವನಿಗೆ ನಾವು  ನೀಡಲಾಗುವುದು ಒಂದೆ ಅದು ಪ್ರೀತಿ ಮಾತ್ರ’ ಎಂದು ಜಗ್ಗೇಶ್ ಕರೆಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಸಿನಿಮಾಗೆ ಸೇರ್ಪಡೆಯಾದ ಮತ್ತೊಬ್ಬ ಸ್ಟಾರ್ ನಟ