ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿರುವ ' ಇದೊಳ್ಳೆ ರಾಮಾಯಣ ' ಸಿನಿಮಾ ಇದೇ ಅಕ್ಟೋಬರ್ 7 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಎರಡನೆಯ ಟೀಸರ್ ಬಿಡುಗಡೆಯಾಗಿದೆ.
ಇದೊಳ್ಳೆ ರಾಮಾಯಣ' ಚಿತ್ರದ ಪ್ರಮುಖ ವಿಶೇಷತೆಯೆಂದರೆ, ಚಿತ್ರದಲ್ಲಿ ಐವರು ರಾಷ್ಟ್ರ ಪ್ರಶಸ್ತಿ ವಿಜೇತರು ಮತ್ತು ಮೂವರು ರಾಜ್ಯ ಪ್ರಶಸ್ತಿ ವಿಜೇತರು ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ
ರಾಷ್ಟ್ರ ಪ್ರಶಸ್ತಿ ವಿಜೇತರಾದ ಪ್ರಕಾಶ್ ರೈ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳಯರಾಜ, ಕಲಾ ನಿರ್ದೇಶಕ ಶಶಿಧರ ಅಡಪ ಮತ್ತು ಸಂಕಲನಕಾರ ಶ್ರೀಕರ್ ಪ್ರಸಾದ್ ಇದ್ದರೆ, ರಾಜ್ಯ ಪ್ರಶಸ್ತಿ ವಿಜೇತರಲ್ಲಿ ನಟ ಅಚ್ಯುತ್ ಕುಮಾರ್, ಲೇಖಕ ಜೋಗಿ ಮತ್ತು ಗೀತರಚನೆಕಾರ ಜಯಂತ್ ಕಾಯ್ಕಿಣಿ ಈ ಚಿತ್ರದಲ್ಲಿ ಶ್ರಮ ಸುರಿದಿದ್ದಾರೆ.
ಇದೊಳ್ಳೆ ರಾಮಾಯಣ ಲೇಟೆಸ್ಟ್ ಟೀಸರ್