Select Your Language

Notifications

webdunia
webdunia
webdunia
webdunia

ಜಯಲಲಿತಾಗೆ ತುಂಬಾ ನೋವು ಕೊಟ್ಟೆ: ರಜನಿಕಾಂತ್

ಜಯಲಲಿತಾಗೆ ತುಂಬಾ ನೋವು ಕೊಟ್ಟೆ: ರಜನಿಕಾಂತ್
Chennai , ಸೋಮವಾರ, 12 ಡಿಸೆಂಬರ್ 2016 (12:54 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಕೋಹಿನೂರ್ ವಜ್ರ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿವರ್ಣಿಸಿದ್ದಾರೆ. ದಕ್ಷಿಣ ಭಾರತ ಕಲಾವಿದರ ನೇತೃತ್ವದಲ್ಲಿ ನಡೆದ ಜಯಲಲಿತಾ ಮತ್ತು ಪ್ರಮುಖ ರಾಜಕೀಯ ವಿಶ್ಲೇಷಕ, ಪತ್ರಕರ್ತ ಚೋ ರಾಮಸ್ವಾಮಿ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
 
ಪುರುಷ ಪ್ರಧಾನ ಜಗತ್ತಿನಲ್ಲಿ ಜಯಲಲಿತಾ ಅದೆಷ್ಟೋ ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ. 1996ರ ಚುನಾವಣೆಯಲ್ಲಿ ಜಯಲಲಿತಾ ವಿರುದ್ಧ ತಾನು ಕೊಟ್ಟಿದ್ದ ಹೇಳಿಕೆಯನ್ನು ನೆನಪಿಸಿಕೊಂಡರು. "ನಾನು ಅವರಿಗೆ ನೋವು ಕೊಟ್ಟಿದ್ದೇನೆ. ಆಗ ಅವರ ಪಕ್ಷ ಸೋಲಲು ನಾನು ಕಾರಣ" ಎಂದಿದ್ದಾರೆ. 
 
ಜಯಲಲಿತಾ ಪಕ್ಷವನ್ನು ಮತ್ತೆ ಗೆಲ್ಲಿಸಿದರೆ ತಮಿಳುನಾಡನ್ನು ಆ ದೇವರು ಸಹ ಕಾಪಾಡಲ್ಲ ಎಂಬ ಮಾತುಗಳನ್ನು ಆಗ ಹೇಳಿದ್ದೆ ಎಂದು ಅವರು ನೆನಪಿಕೊಂಡು ಪಶ್ಚಾತ್ತಾಪ ಪಟ್ಟರು. ಆಗ ಡಿಎಂಕೆ, ಟಿಎಂಸಿ ಮೈತ್ರಿ ಭರ್ಜರಿ ಜಯ ಸಾಧಿಸಿತ್ತು. ಆಮೇಲೆ ಜಯ ತಾನೇನು ಎಂದು ನಿರೂಪಿಸಿಕೊಂಡು ಜನರ ಪ್ರೇಮಾಭಿಮಾನಗಳನ್ನು ಸಂಪಾದಿಸಿಕೊಂಡರು ಎಂದು ಹಾಡಿ ಹೊಗಳಿದರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸೆಟ್ ಆದಮೇಲೆ ಆಫರ್‌ಗಳು ಕಮ್ಮಿ ಆಗಿವೆ